ರಸ್ತೆ ಅಗೆತ ನಿಷೇಧ

Update: 2020-06-02 14:00 GMT

ಉಡುಪಿ, ಜೂ. 2: ಮಳೆಗಾಲ ಆರಂಭವಾಗಿರುವುದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಟೆಲಿಫೋನ್/ವಿದ್ಯುತ್ ಕೇಬಲ್/ಕುಡಿಯುವ ನೀರು/ಒಳಚರಂಡಿ ಕೊಳವೆ ಇತ್ಯಾದಿಗಳನ್ನು ಅಳವಡಿಸಲು ರಸ್ತೆ ಅಗೆತ ಮಾಡುವುದನ್ನು ಜೂ. 3ರಿಂದ ಆಗಸ್ಟ್ 31ರವರೆಗೆ ನಿಷೇಧಿಸಲಾಗಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತ ಆನಂದ ಸಿ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News