ಉಡುಪಿ: ರಸ್ತೆ ಬದಿಯಲ್ಲಿ ವ್ಯಾಪಾರ ನಿಷೇಧ

Update: 2020-06-02 14:01 GMT

 ಉಡುಪಿ, ಜೂ.2: ಉಡುಪಿ ನಗರದ ಎಲ್ಲಾ ರಸ್ತೆ ಬದಿ ವ್ಯಾಪಾರಿಗಳು ಮತ್ತು ರಸ್ತೆ ಬದಿ ವಾಹನಗಳಲ್ಲಿ ಹಣ್ಣು/ತರಕಾರಿ ಹಾಗೂ ರಖಂ (ಹೋಲ್‌ಸೇಲ್) ವ್ಯಾಪಾರಿಗಳು ಜೂನ್ 4ರಿಂದ ತಮ್ಮ ಎಲ್ಲಾ ವ್ಯಾಪಾರ/ವಹಿವಾಟುಗಳನ್ನು ನಗರದ ಆದಿಉಡುಪಿ ಬಳಿ ಇರುವ ಎಪಿಎಂಸಿ ವಾರುಕಟ್ಟೆಗೆ ಸ್ಥಳಾಂತರಿಸ ಬೇಕು.

ಯಾವುದೇ ತರಕಾರಿ/ಹಣ್ಣುಹಂಪಲು ವ್ಯಾಪಾರಸ್ಥರು ಎಪಿಎಂಸಿ ಮಾರುಕಟ್ಟೆ ಆವರಣವನ್ನು ಹೊರತುಪಡಿಸಿ, ನಗರದ ಯಾವುದೇ ಪ್ರದೇಶಗಳಲ್ಲಿ /ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಸಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಹಾಗೂ ದಂಡ ವಿಧಿಸಲಾಗುವುದು ಎಂದು ಪೌರಾಯುಕ್ತ ಆನಂದ ಸಿ.ಕಲ್ಲೋಳಿಕರ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News