ಬಿವಿಟಿಯಿಂದ ಕೋವಿಡ್ ಜಾಗೃತಿ ಅಭಿಯಾನ
Update: 2020-06-02 14:08 GMT
ಉಡುಪಿ, ಜೂ. 2: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ವತಿಯಿಂದ ಕೋವಿಡ್ ಜಾಗೃತಿ ಅಭಿಯಾನದ ಅಂಗವಾಗಿ ಉಡುಪಿ ಸಿಟಿ ಬಸ್ನಿಲ್ದಾಣದ ರಿಕ್ಷಾ ಚಾಲಕರಿಗೆ ಕೋವಿಡ್-19 ಮಹಾಮಾರಿಯನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ಮರು ಬಳಕೆ ಮಾಡಬಹುದಾದ ಬಟ್ಟೆಯ ಮಾಸ್ಕ್, ಜಾಗೃತಿ ಪೋಸ್ಟರ್ ಮತ್ತು ಸ್ಟಿಕ್ಕರ್ಗಳನ್ನು ವಿತರಿಸಲಾಯಿತು. ಬಿವಿಟಿಯ ಕಾರ್ಯಕ್ರಮ ಸಹಾಯಕರಾದ ರಾಘವೇಂದ್ರ ಆಚಾರ್ಯ, ಸುರೇಶ ಕುಲಾಲ್ ಮತ್ತು ಸುಮಂತ್ ಭಟ್ ಕಾರ್ಯಕ್ರಮ ಸಂಯೋಜಿಸಿದರು.
ಸಿಟಿ ಬಸ್ನಿಲ್ದಾಣ ರಿಕ್ಷಾಚಾಲಕರ ಸಂಘದ ಅಧ್ಯಕ್ಷರಾದ ಅಬೂಬಕ್ಕರ್, ಕಾರ್ಯದರ್ಶಿ ಪ್ರಭಾಕರ ಗಾಣಿಗ ಮತ್ತು ಸದಸ್ಯರು ಕಾಯರ್ಕ್ರಮದಲ್ಲಿ ಭಾಗವಹಿಸಿದರು.