ಶ್ರೀಕೃಷ್ಣ ಮಠದಲ್ಲಿ ಭಾಗೀರಥಿ ಜನ್ಮದಿನಾಚರಣೆ

Update: 2020-06-02 14:14 GMT

ಉಡುಪಿ, ಜೂ.2: ಶ್ರೀಕೃಷ್ಣ ಮಠದಲ್ಲಿ ಪ್ರತಿವರ್ಷದಂತೆ ಭಾಗೀರಥಿ ಜನ್ಮದಿನಾಚರಣೆಯ ಅಂಗವಾಗಿ ಮಂಗಳವಾರ ರಥಬೀದಿಯಲ್ಲಿ ದೇವರಿಗೆ ಪಲ್ಲಕ್ಕಿ ಉತ್ಸವ ನಡೆದು ಮಧ್ವಸರೋವರದ ಭಾಗೀರಥಿ ಗುಡಿಯ ಎದುರುಗಡೆ ತೊಟ್ಟಿಲು ಪೂಜೆಯ ಬಳಿಕ ಅಷ್ಟಾವಧಾನ ನಡೆಯಿತು. ಗರ್ಭಗುಡಿಯ ಒಳಗೆ ಬಲಿದೇವರನ್ನು ಇರಿಸಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥರು, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥರು, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಹಾಗೂ ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥರು ಉಪಸ್ಥಿತರಿದ್ದರು.

ಇನ್ನು ಉತ್ಥಾನ ದ್ವಾದಶಿಯವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಯಾವುದೇ ಉತ್ಸವ, ರಥೋತ್ಸವ ನಡೆಯುವುದು. ಉತ್ಥಾನ ದ್ವಾದಶಿಯ ದಿನದಂದು ಬಲಿದೇವರನ್ನು ಹೊರತಂದು ರಥೋತ್ಸವ ಹಾಗೂ ಇತರ ಉ್ಸವಗಳು ಪ್ರಾರಂಭಗೊಳ್ಳುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News