ಹಿರಿಯಡ್ಕ: ಅನಾರೋಗ್ಯದಿಂದ ವಿಚಾರಣಾಧೀನ ಕೈದಿ ಮೃತ್ಯು

Update: 2020-06-02 17:30 GMT

ಹಿರಿಯಡ್ಕ, ಜೂ.2: ಹಿರಿಯಡ್ಕ ಅಂಜಾರಿನಲ್ಲಿರುವ ಜಿಲ್ಲಾ ಕಾರಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಜೂ. 2ರಂದು ನಸುಕಿನ ವೇಳೆ ನಡೆದಿದೆ.

ಮೃತರನ್ನು ಶಿವಮೊಗ್ಗದ ಟಿಪ್ಪು ನಗರದ ಸಯ್ಯದ್ ಮೆಹಬೂಬ್ ಪಾಷಾ(58) ಎಂದು ಗುರುತಿಸಲಾಗಿದೆ. ಇವರು ಬಂಧಿತನಾಗಿ ಕಾರಗೃಹಕ್ಕೆ ಬಂದ ಸಮಯ ದಿಂದ ಮಧುಮೇಹ ಹಾಗೂ ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಅವರಿಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಹಲವು ಬಾರಿ ಚಿಕಿತ್ಸೆ ನೀಡಲಾಗಿತ್ತು. ಜೂ.2ರಂದು ನಸುಕಿನ ವೇಳೆ ತೀವ್ರವಾಗಿ ಅಸ್ವಸ್ಥಗೊಂಡ ಸಯ್ಯದ್ ಮೆಹಬೂಬ್ ಪಾಷಾ, ಜಿಲ್ಲಾಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News