ಜೂ.10: ಸಿಐಟಿಯು ಪ್ರತಿಭಟನೆ
Update: 2020-06-02 17:46 GMT
ಮಂಗಳೂರು, ಜೂ.2: ಕೊರೋನ-ಲಾಕ್ಡೌನ್ನಿಂದ ದ.ಕ.ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಬೀಡಿ ಕಾರ್ಮಿಕರು ಬೀಡಿ ಸುರುಟಿ ಕುಟುಂಬ ನಿರ್ವಹಿಸುತ್ತಿದ್ದಾರೆ. ಇದೀಗ ಈ ಕುಟುಂಬ ಬೀಡಿ ಕೆಲಸಲ್ಲದೆ, ವೇತನವಿಲ್ಲದೆ ಕಂಗಾಲಾಗಿದೆ. ರಾಜ್ಯ ಸರಕಾರ ಆಟೋ, ಕಾರು, ಕ್ಷೌರಿಕ ಮತ್ತು ಡೋಬಿ ಕಾರ್ಮಿಕ ವಿಭಾಗಕ್ಕೆ ಪರಿಹಾರ ಘೋಷಣೆ ಮಾಡಿದಂತೆ ಬೀಡಿ ಕಾರ್ಮಿಕರಿಗೆ ಕೂಡ ಪರಿಹಾರದ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ಜೂ.10ರಂದು ಜಿಲ್ಲೆಯ ಎಲ್ಲಾ ತಾಲೂಕು, ವಲಯ, ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಿದೆ ಎಂದು ಪ್ರಕಟನೆ ತಿಳಿಸಿದೆ.