ಕೊರೋನ ಪರಿಹಾರ ಧನ : ಆಟೊ, ಟ್ಯಾಕ್ಸಿ ಚಾಲಕರಿಂದ ಅರ್ಜಿ ಆಹ್ವಾನ

Update: 2020-06-02 17:55 GMT

ಮಂಗಳೂರು, ಜೂ.2: ರಾಜ್ಯ ಸರಕಾರದಿಂದ 5,000 ರೂ. ಪರಿಹಾರ ಧನ ಪಡೆಯಲು ಆಟೊ ಹಾಗೂ ಟ್ಯಾಕ್ಸಿ ಚಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರು ತಮ್ಮ ವಾಹನದ ಆರ್.ಸಿ., ಚಾಲನಾ ಪರವಾನಿಗೆ, ಆಧಾರ್ ಕಾರ್ಡ್ (ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಯಾಗಿರಬೇಕು), ಬ್ಯಾಡ್ಜ್ ನಂಬರ್‌ನ ದಾಖಲೆಗಳನ್ನು ಅರ್ಜಿಯ ಜತೆಗೆ ಲಗತ್ತಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಅಲ್ಪ ಸಂಖ್ಯಾತರ ಮತ್ತು ವಕ್ಫ್ ಇಲಾಖೆಯ ಮಾಹಿತಿ ಕೇಂದ್ರ ಅಥವಾ ಝೀನತ್ ಭಕ್ಷ್ ಕೇಂದ್ರ ಜುಮ್ಮಾ ಮಸೀದಿಯ ಬಂದರ್ ಕಚೇರಿಯನ್ನು ಸಂಪರ್ಕಿಸಲು ಝೀನತ್ ಭಕ್ಷ್ ಮತ್ತು ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News