ಶಾರ್ಜಾದಲ್ಲಿ ಇಸ್ಲಾಮ್, ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಪೋಸ್ಟ್‌: ಬಂಟ್ವಾಳದ ಯುವಕ ಕೆಲಸದಿಂದ ವಜಾ

Update: 2020-06-04 04:50 GMT

ಬಂಟ್ವಾಳ, ಜೂ. 4: ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮ್ ಧರ್ಮ ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಪೋಸ್ಟ್‌ ಹಾಕಿರುವ ಹಿನ್ನೆಲೆ ಯಲ್ಲಿ ಶಾರ್ಜಾದ ಪ್ರತಿಷ್ಠಿತ ಕಂಪೆನಿಯೊಂದು ಬಂಟ್ವಾಳ ತಾಲೂಕಿನ ಯುವಕನೊಬ್ಬನನ್ನು ಕೆಲಸದಿಂದ ವಜಾಗೊಳಿಸಿದೆ.

ತಾಲೂಕಿನ ಕಾವಳಕಟ್ಟೆ ನಿವಾಸಿ ಸಂದೀಪ್ ನಾಯಕ್ ಕೆಲಸದಿಂದ ವಜಾಗೊಂಡ ಯುವಕ.

ಶಾರ್ಜಾದ ಅಲ್ ಫುಥೈನ್ ನ ಹೋಂಡಾ ಕಂಪೆನಿಯಲ್ಲಿ ಕೆಲಸದಲ್ಲಿದ್ದ ಸಂದೀಪ್ ನಾಯಕ್ ಫೇಸ್ ಬುಕ್ ನಲ್ಲಿ ಇಸ್ಲಾಮ್ ಮತ್ತು ಮುಸ್ಲಿಮ್ ವಿರೋಧಿ ಪೋಸ್ಟ್ ಹಾಕಿದ್ದ ಎನ್ನಲಾಗಿದೆ. ಈ ಪೋಸ್ಟ್ ವೈರಲ್ ಆಗಿ ಸಂದೀಪ್ ನಾಯಕ್ ಕೆಲಸ ಮಾಡುತ್ತಿದ್ದ ಕಂಪೆನಿಯ ಗಮನಕ್ಕೆ ಬಂದಿದ್ದು ಇದೀಗ ಆತನನ್ನು ಕಂಪೆನಿ ಕೆಲಸದಿಂದ ವಜಾಗೊಳಿಸಿದೆ‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News