ಉಡುಪಿ: ಕರಾವಳಿ ಅಭಿವೃಧ್ದಿ ಪ್ರಾಧಿಕಾರದಿಂದ ಮೂಲ ಸೌಲಭ್ಯ ಕಾರ್ಯ

Update: 2020-06-04 12:21 GMT

ಉಡುಪಿ, ಜೂ.3: ಗ್ರಾಮಾಂತರ ಜನರ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸರಕಾರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮುಖಾಂತರ ಮೂಲ ಸೌಲಭ್ಯ ವನ್ನು ಕಲ್ಪಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

ಇತ್ತೀಚೆಗೆ ಉಡುಪಿ ತಾಲೂಕಿನ ಕಾಪು ವಿಧಾನ ಸಭಾ ಕ್ಷೇತ್ರದ ಪೆರ್ಡೂರಿನ ಪಕ್ಕಾಲು ಎಂಬಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ ಹಾಗೂ ಮುದರಂಗಡಿ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಪಿಲಾರು ಜಾರಂತಾಯ ದೇವಸ್ಥಾನದಿಂದ ಕಲ್ಲಿಮಾರು ಸಂಪರ್ಕ ರಸ್ತೆ, ಪಿಲಾರು ಗ್ರಾಮದ ಜಾಲಮೇಲ್ ಜಂಗಮ ಮಠ ಕಾಲನಿ ರಸ್ತೆ, ಪಿಲಾರು ಪರಾಡಿ ಕೋರ್ದಬ್ಬು ದೈವಸ್ಥಾನದಿಂದ ಕಲ್ಲಿಮಾರುವರೆಗಿನ ರಸ್ತೆ ಕಾಂಕ್ರಿಟೀಕರಣ ಮತ್ತು ಮುದರಂಗಡಿ ಬಯಲುರಂಗ ಮಂದಿರ ಸೇರಿದಂತೆ ಒಟ್ಟು ಸುಮಾರು ಎರಡು ಕೋಟಿ ರೂ.ಗಳ ಕಾಮಗಾರಿಳನ್ನು ವೀಕ್ಷಿಸಿ ಮಾತನಾಡುತಿದ್ದರು.

ಸರಕಾರಿ ಶಾಲಾ ಮೈದಾನದಲ್ಲಿ ಗ್ಯಾಲರಿ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕಾಮಗಾರಿ ಪರಿಶೀಲನೆ ಸಮಯ ಮುದರಂಗಡಿಯ ಜಿಪಂ ಸದಸ್ಯೆ ಶಿಲ್ಪ ಜಿ.ಸುವರ್ಣ, ಪೆರ್ಡೂರು ಗ್ರಾಪಂ ಉಪಾಧ್ಯಕ್ಷ ಸುರೇಶ್ ಶೇರಿಗಾರ್, ಗ್ರಾಪಂ ಸದಸ್ಯ ದಿನೇಶ್ ಹೆಗ್ಡೆ, ಆನಂದ ಕುಲಾಲ್, ಮಲ್ಲಿಕಾ ಶೆಟ್ಟಿ, ಸದಾನಂದ ಕುಲಾಲ್, ಸುಭಾಷ್ ನಾಯಕ, ತುಕಾರಾಂ ಪೆರ್ಡೂರು, ಶಿವರಾಂ ಭಂಡಾರಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರ ಪ್ರಭು ಹಾಗೂ ಸ್ಥಳೀಯ ಬಿ.ಜೆ.ಪಿ ಮುಖಂಡರು ಹಾಜರಿದ್ದರು.

ಅಲ್ಲದೇ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿ’ ಸೋಜಾ, ವಲಯಾಧಿಕಾರಿ ಕೆ. ಚಂದ್ರಕಾಂತ್, ಪ್ರಭಾಕರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕೆ.ಆರ್.ಐ.ಡಿ.ಎಲ್. ಉಡುಪಿ ಮತ್ತು ಇಂಜಿನಿಯರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News