×
Ad

‘ಮರಕೊಗಾವಾತೊ ನೂರು ಬ್ಯಾರಿಙ’ ಗ್ರಂಥ ರಚನೆಗೆ ಮಾಹಿತಿ ನೀಡಲು ಮನವಿ

Update: 2020-06-08 13:12 IST

ಮಂಗಳೂರು, ಜೂ. 8: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ‘ಮರಕೊಗಾವಾತೊ ನೂರು ಬ್ಯಾರಿಙ’ (ಮರೆಯಲಾಗದ ನೂರು ಬ್ಯಾರಿ ಮಹನೀಯರು) ಎಂಬ ವ್ಯಕ್ತಿ ಪರಿಚಯಗಳನ್ನು ಒಳಗೊಂಡ ಗ್ರಂಥ ಮಾಲಿಕೆಯನ್ನು ಪ್ರಕಟಿಸಲು ನಿರ್ಧರಿಸಿದೆ. ಅದರಂತೆ ಕರ್ನಾಟಕ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಗಳಿಸಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಬ್ಯಾರಿ ಮಹನೀಯರ ಬಗ್ಗೆ ಸಾರ್ವಜನಿಕರಿಂದ ಮಾಹಿತಿಯನ್ನು ಕೋರಲಾಗಿದೆ.

ಈ ಮಾಹಿತಿಗಳ ಪೈಕಿ ಪ್ರಾಶಸ್ತ್ಯ ಪಡೆದ ನೂರು ವ್ಯಕ್ತಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ಒಬ್ಬರಿಗೆ 3 ರಿಂದ 5 ಪುಟಗಳು ಮೀಸಲಿಡಲಾಗುವುದು. ಇದರಲ್ಲಿ ಮಹನೀಯರ ವ್ಯಕ್ತಿ ಪರಿಚಯ, ಸಾಧನೆ, ಅಪರೂಪದ ಸಂಗ್ರಹ ಚಿತ್ರಗಳು ಅಡಕವಾಗಿರುತ್ತದೆ. ಸಾರ್ವಜನಿಕರು ಬ್ಯಾರಿ ಭಾಷೆ, ಕಲೆ, ಸಾಹಿತ್ಯ, ರಾಜಕೀಯ, ಸಾಮಾಜಿಕ, ಶಿಕ್ಷಣ, ಔದ್ಯೋಗಿಕ, ಸರಕಾರದ ಮಾಜಿ ಹಾಗೂ ಹಾಲಿ ನೌಕರರು, ಸಾಂಸ್ಕೃತಿಕ ಸಂಘಟಕರು ಮುಂತಾದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಬ್ಯಾರಿ ಮಹನೀಯರ ಬಗ್ಗೆ ಅಕಾಡಮಿಯ ಕಚೇರಿಯ ವಾಟ್ಸಪ್ ಸಂಖ್ಯೆ 7483946578 (ಕಚೇರಿ ಸಮಯದಲ್ಲಿ ಮಾತ್ರ)ಕ್ಕೆ ಅಥವಾ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಸಾಮರ್ಥ್ಯ ಸೌಧ, ಮಂಗಳೂರು ತಾಲೂಕು ಪಂಚಾಯತ್ ಹಳೆ ಕಟ್ಟಡ, 2ನೇ ಮಹಡಿ, ಮಿನಿ ಧಾನಸೌಧದ ಬಳಿ, ಮಂಗಳೂರು 575001 ಈ ವಿಳಾಸಕ್ಕೆ ಹೆಸರನ್ನು ಸೂಚಿಸಬಹುದು ಅಥವಾ 3 ರಿಂದ 5 ಪುಟಗಳ ಮಾಹಿತಿಯನ್ನು ಒದಗಿಸಬಹುದು. ಪೂರ್ಣ ಮಾಹಿತಿ ಒದಗಿಸಿದವರ ಹೆಸರನ್ನು ಗ್ರಂಥದಲ್ಲಿ ನಮೂದಿಸಲಾಗುವುದು.

ಇದು ಮುಂದಿನ ಪೀಳಿಗೆಗೆ ಹಾಗೂ ಇತಿಹಾಸದಲ್ಲಿ ಅಚ್ಚೊತ್ತಿ ನಿಲ್ಲುವ ಬ್ಯಾರಿ ಮಹನೀಯರ ಕುರಿತು ಇರುವ ಐತಿಹಾಸಿಕ ಗ್ರಂಥವಾಗಿರುವುದರಿಂದ ಸಾರ್ವಜನಿಕರು ಈ ಬಗ್ಗೆ ಅಕಾಡಮಿಯ ಮಹತ್ತರವಾದ ಯೋಜನೆಯಲ್ಲಿ ಕೈಜೋಡಿಸಬೇಕು ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮನವಿ ಮಾಡಿತ್ತಾರೆ.

ಬ್ಯಾರಿ ಮತ್ತು ಮಲಾಮೆ ಭಾಷಿಗರಲ್ಲದ ಉರ್ದು, ಕೇರಳ ಮಲಯಾಳಂ ಹಾಗೂ ಇನ್ನಿತರ ಭಾಷಿಕರು ಈ ಗ್ರಂಥದ ವ್ಯಾಪ್ತಿಗೆ ಒಳಪಡುವುದಿಲ್ಲ. ಹೆಚ್ಚಿನ ಮಾಹಿತಿಗೆ ಪುಸ್ತಕ ಪ್ರಕಟನಾ ಸಮಿತಿಯ ಸದಸ್ಯರಾದ ಹಂಝ ಮಲಾರ್ (ಮೊ : 9481017495), ಜಲೀಲ್ ಮುಕ್ರಿ (ಮೊ : 9945479369), ಆಯಿಶಾ ಯು.ಕೆ (ಮೊ: 9035308709) ಇವರನ್ನು ಸಂಪರ್ಕಿಸಬಹುದು ಎಂದು ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News