ಜ್ಯೂಸ್ ಅಂಗಡಿಗೆ ನುಗ್ಗಿದ ಕಾರು: ಮೂವರಿಗೆ ಗಾಯ
Update: 2020-06-12 16:23 GMT
ಕೋಟ, ಜೂ.12: ಪಾಂಡೇಶ್ವರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಬದಿಯ ವಿಘ್ನೇಶ ಜ್ಯೂಸ್ ಸೆಂಟರಿಗೆ ಕಾರೊಂದು ನುಗ್ಗಿ ಢಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಜೂ.11ರಂದು ಮಧ್ಯಾಹ್ನ ವೇಳೆ ನಡೆದಿದೆ.
ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ, ಜ್ಯೂಸ್ ಅಂಗಡಿಯ ಒಳನುಗ್ಗಿ ಜ್ಯೂಸ್ ಮೆಷಿನ್ ಹಾಗೂ ಅಂಗಡಿಯಲ್ಲಿದ್ದ ಎಲ್ಲರಿಗೂ ಢಿಕ್ಕಿ ಹೊಡೆದು ಮುಂದಕ್ಕೆ ಹೋಗಿ ರಸ್ತೆಯ ಬದಿ ನಿಂತಿದ್ದ ಸ್ಕೂಟಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಅಪಘಾತದಲ್ಲಿ ಜ್ಯೂಸ್ ಅಂಗಡಿಯಲ್ಲಿದ್ದ ಶರತ್ ಕುಮಾರ್, ಸೌಜನ್ಯ, ರೇವತಿ ಎಂಬವರು ಗಾಯಗೊಂಡರು. ಇವರಲ್ಲಿ ಗಂಭೀರವಾಗಿ ಗಾಯ ಗೊಂಡ ರೇವತಿ ಎಂಬವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.