ಕೆರೆಯಲ್ಲಿ ಮುಳುಗಿ ಕೃಷ್ಣಾಪುರದ ಯುವಕ ಮೃತ್ಯು
Update: 2020-06-13 17:15 IST
ಮಂಗಳೂರು, ಜೂ.13: ಕೆರೆಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಯುವಕ ಈಜು ಬಾರದೆ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆಯು ಕಾಟಿಪಳ್ಳ ಕೃಷ್ಣಾಪುರದಲ್ಲಿ ಶನಿವಾರ ನಡೆದಿದೆ.
ಕೃಷ್ಣಾಪುರ ನಿವಾಸಿ ಸಂತೋಷ್ (21) ಮೃತ ಯುವಕ.
ಈತನು ಸ್ನೇಹಿತರ ಜೊತೆಗೂಡಿ ಕೃಷ್ಣಾಪುರ ಸಮೀಪದ ಕೆರೆಗೆ ಸ್ನಾತಕ್ಕೆಂದು ತೆರಳಿದ್ದು, ಈ ವೇಳೆ ಈಜು ಬಾರದೇ ನೀರುಪಾಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.