​ಆರ್ಮಿ ಸಿವಿಲಿಯನ್ ಉದ್ಯೋಗಿ ಮೃತ್ಯು

Update: 2020-06-13 16:38 GMT

ಕಾಪು, ಜೂ.13: ಆರ್ಮಿ ಸಿವಿಲಿಯನ್ ಕೆಲಸ ಮಾಡಿಕೊಂಡಿದ್ದ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಕ್ರಿಸ್ಟೋ ರಾಯ್ ಟೊಪೋ(33) ಎಂಬ ವರು ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ.

ಇವರು ಡಯಾಬಿಟಿಸ್ ಮತ್ತು ಭೇದಿ ಖಾಯಿಲೆಯಿಂದ ರಜೆ ಹಾಕಿ, 2019ರ ನ.18ರಂದು ತನ್ನ ತಾಯಿ ಜೊತೆ ಉಡುಪಿ ಉದ್ಯಾವರ ಗ್ರಾಮದ ಪಿತ್ರೋಡಿಯಲ್ಲಿರುವ ತನ್ನ ಅಕ್ಕ ಮನೆಗೆ ಬಂದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜೂ.12ರಂದು ಸಂಜೆ 5:30 ಗಂಟೆ ಸುಮಾರಿಗೆ ಕ್ರಿಸ್ಟೋ ರಾಯ್ ಟೊಪೋ ಮನೆಯ ಸಮೀಪ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು.

ಇದರಿಂದ ಅವರ ಖಾಯಿಲೆ ಉಲ್ಬಣಗೊಂಡಿದ್ದು, ಜೂ.13ರಂದು ಬೆಳಗಿನ ಜಾವ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಅವರು ಮೃತಪಟ್ಟರೆನ್ನಲಾಗಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News