ರಿಕ್ಷಾ ಢಿಕ್ಕಿ; ಬೈಕ್ ಸವಾರ ಮೃತ್ಯು

Update: 2020-06-16 16:37 GMT

ಕಾರ್ಕಳ, ಜೂ.16: ಅಟೋರಿಕ್ಷಾವೊಂದು ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ರಸ್ತೆಗೆ ಬಿದ್ದು ತಲೆಗಾದ ತೀವ್ರ ಗಾಯಗಳಿಂದ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ಪಳ್ಳಿ ಗ್ರಾಮದ ಪಳ್ಳಿ ಸರಕಾರಿ ಹೈಸ್ಕೂಲ್ ಬಳಿ ಸಂಭವಿಸಿದೆ.

ಮೃತ ಬೈಕ್ ಸವಾರರನ್ನು ಶಿರ್ವ ಗ್ರಾಮ ಮಟ್ಟಾರಿನ ಬಂಗ್ಲೆಗುಡ್ಡೆ ಜನತಾ ಕಾಲೋನಿಯ ಬಾಬು ಎಂಬವರ ಪುತ್ರ ಸಂದೀಪ (20) ಎಂದು ಗುರುತಿಸಲಾಗಿದೆ. ಇವರು ನಿನ್ನೆ ಸಂಜೆ 5:45ರ ಸುಮಾರಿಗೆ ಪಳ್ಳಿಯಿಂದ ಕುಂಟಾಡಿ ಕಡೆಗೆ ತನ್ನ ಪಲ್ಸರ್ ಬೈಕ್‌ನಲ್ಲಿ ಹೋಗುತಿದ್ದಾಗ, ಅಟೋರಿಕ್ಷಾ ಚಾಲಕನು ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲೇ ಬಲಕ್ಕೆ ರಿಕ್ಷಾವನ್ನು ತಿರುಗಿಸಿ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದಿದ್ದನು. ಇದರಿಂದ ಬೈಕ್ ಸಮೇತ ರಸ್ತೆಗೆ ಬಿದ್ದ ಸಂದೀಪ ತಲೆಗೆ ತೀವ್ರ ಗಾಯಗಳಾಗಿದ್ದವು. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News