ಮೂಡುಬಿದಿರೆ ತಾಲೂಕಿನ 14 ಕಲ್ಲಿನ ಕೋರೆಗಳಿಗೆ ಲೋಕಾಯುಕ್ತ ದಾಳಿ

Update: 2020-06-17 17:25 GMT

ಮೂಡುಬಿದಿರೆ : ತಾಲೂಕಿನ ನಿಡ್ಡೋಡಿ ಹಾಗೂ ನೀರುಡೆ ಪರಿಸರದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ 14 ಕೆಂಪು ಕಲ್ಲಿನ ಕೋರೆಗಲಿಗೆ  ಮಂಗಳೂರು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಬುಧವಾರ ಏಕಕಾಲಕ್ಕೆ ದಾಳಿ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿಡ್ಡೋಡಿ ಪರಿಸರದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾನೂನುಬಾಹಿರವಾಗಿ ಕೆಂಪು ಕಲ್ಲು ಕೋರೆಗಳಿಂದ ಕಲ್ಲುಗಳನ್ನು ತೆಗೆಯಲಾಗುತ್ತಿತ್ತು. ಈ ನಿಟ್ಟಿನಲ್ಲಿ ಸಾರ್ವಜನಿಕರು ತಹಾಶೀಲ್ದಾರ್ ಅವರಿಗೆ ಕೆಲವು ದಿನಗಳ ಹಿಂದೆ ದೂರು ನೀಡಿದ್ದರು. ಈ ಸಂದರ್ಭ ನೀರುಡೆ ಪರಿಸರದ ಒಂದು ಕಲ್ಲುಕೋರೆಗೆ ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ಹಾಗೂ ಮೂಡುಬಿದಿರೆ ತಹಶಿಲ್ದಾರ್ ಜಂಟಿ ದಾಳಿ ನಡೆಸಿದ್ದರು. ತಹಶೀಲ್ದಾರ್ ಅವರು ಕೇವಲ ಒಂದು ಕೋರೆಗೆ ಮಾತ್ರ ದಾಳಿ ನಡೆಸಿದ್ದರು. ಉಳಿದ ಅಕ್ರಮ ಕಲ್ಲಿನ ಕೋರೆಗಳು ಕಾರ್ಯಚರಿಸುತ್ತಿರುವುದಕ್ಕಿ ಕ್ರಮ ಕೈಗೊಳ್ಳ ಬಗ್ಗೆ ಸ್ಥಳೀಯರಿಗೆ ಅಸಮಾಧಾನವಿತ್ತು ಈ ಹಿನ್ನಲೆಯಲ್ಲಿ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಇನ್‍ಸ್ಪೆಕ್ಟರ್ ಭಾರತಿ, ಎಎಸ್‍ಐ ವೇಣುಗೋಪಾಲ ಸಿಬಂದಿಗಳಾದ ಸುರೇಂದ್ರ ಹಾಗೂ ಪ್ರದೀಪ್ ದಾಳಿ ನಡೆಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಸುಮಾರು 14 ಕಲ್ಲುಕೋರೆಗಳನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News