​ಜೂ.23ರಂದು ವಿದ್ಯುತ್ ನಿಲುಗಡೆ

Update: 2020-06-20 13:32 GMT

ಮಂಗಳೂರು, ಜೂ.20: ಪಣಂಬೂರು, ಗುರುಪುರ, ಮೂಡುಬಿದಿರೆ ವ್ಯಾಪ್ತಿಯ ಕೆಲವು ವಿದ್ಯುತ್ ಫೀಡರ್‌ಗಳಲ್ಲಿ ಜಿಒಎಸ್ ದುರಸ್ತಿ, ಜಂಗಲ್ ಕಟ್ಟಿಂಗ್ ಸಹಿತ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಜೂ.23ರಂದು ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಕಂಡುಬರಲಿದೆ.

* ಪಣಂಬೂರು: ಜೂ.23ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ 11 ಕೆವಿ ಹೊಸಬೆಟ್ಟು ಹಾಗೂ ಪಣಂಬೂರು ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದರಿಂದ ಬೈಕಂಪಾಡಿ, ಗೋಕುಲ್‌ನಗರ, ದುರ್ಗಾನಗರ, ಹೊಸಬೆಟ್ಟು, ಕುಳಾಯಿ, ತಾವರೆಕೊಳ, ಹೊನ್ನಕಟ್ಟೆ, ಆಚಾರಿ ಕಾಲನಿ, ಪಣಂಬೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

* ಗುರುಪುರ: ಜೂ.23ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ 110/11 ಕೆವಿ ಗುರುಪುರ ಉಪಕೇಂದ್ರದಿಂದ ಹೊರಡುವ 11 ಕೆವಿ ಸಾದೂರು, ಗುರುಪುರ, ಕುಕ್ಕಟ್ಟೆ ಮತ್ತು ಮುಚ್ಚೂರು ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ.

ಇದರಿಂದ ಗುರುಪುರಪೇಟೆ, ಅಲೈಗುಡ್ಡೆ, ಕೊಟ್ಟಾರಿಗುಡ್ಡೆ, ಮಠದಗುಡ್ಡೆ, ಮಳಲಿ, ಭವಂತಿಬೆಟ್ಟು, ಸಾನ್‌ಬೆಟ್ಟು, ಮುಲ್ಲಗುಡ್ಡೆ, ನಾಡಾಜೆ, ಚೆನ್ನರಪಾದೆ, ಸಾದೂರು, ಅಡ್ಡೂರು, ತಾರಿಕರಿಯ, ಕಾಂಜಿಲಕೋಡಿ, ವಿಕಾಸನಗರ, ಪಡ್ಡಾಯಿಪದವು, ಕೈಕಂಬಪೇಟೆ, ಕಂದಾವರ ಪದವು, ಅಸ್ರಾರ್‌ನಗರ, ಶಾಂತಿನಗರ, ಸೂರಲ್ಪಾಡಿ, ಗುರುಕಂಬ್ಳ, ಗಂಜೀಮಠ, ಅಳಿಕೆಪದವು, ಮುಂಡೇವು, ಗಾಂಧೀನಗರ, ಕುಕ್ಕಟ್ಟೆ, ನಾರ್ಲಪದವು, ಘಟ್ನಮಜಲು, ಮೊಗರು, ಮಡಪಾಡಿ, ಪೂಪಾಡಿಕಲ್ಲು, ಬಸ್ತಿಗುಡ್ಡೆ, ಎಡಪದವು ಪೇಟೆ, ಕಣ್ಣುರಿ, ಮಿಜಾರ್, ಉರ್ಕಿ, ದಡ್ಡಿ, ಧೂಮಚಡವು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

*ಮೂಡುಬಿದಿರೆ: ಅದೇ ದಿನ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ 110/11 ಕೆವಿ ಮೂಡುಬಿದಿರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆವಿ ಮೂಡುಬಿದಿರೆ, ಗಾಂಧೀನಗರ, ಕೋಟೆಬಾಗಿಲು, ಪುಚ್ಚೆಮೊಗರು, ಇರುವೈಲು ಫೀಡರ್‌ಗಳಲ್ಲಿ ನಿಯತಕಾಲಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ.

ಇದರಿಂದ ಮೂಡುಬಿದಿರೆ ಪೇಟೆ, ಮಾಸ್ತಿಕಟ್ಟೆ, ಗಾಂಧೀನಗರ, ಮಹಾವೀರ ಕಾಲೇಜು, ಒಂಟಿಕಟ್ಟೆ, ಕಡಲಕೆರೆ, ನಾಗರಕಟ್ಟೆ, ಅರಮನೆಬಾಗಿಲು, ಜ್ಯೋತಿನಗರ, ಜೈನ್‌ಪೇಟೆ, ಶೇಡಿಗುರಿ, ಹೊಸಬೆಟ್ಟು, ಪುಚ್ಚೆಮೊಗರು, ಅಲಂಗಾರು, ಕೋಟೆಬಾಗಿಲು, ಪ್ರಾಂತ್ಯ, ಕಲ್ಲಬೆಟ್ಟು, ಗಂಟಾಲ್‌ಕಟ್ಟೆ, ಬಿರಾವು, ತಾಕೊಡೆ, ಮಾರೂರು, ಹೊಸಂಗಡಿ, ಇರುವೈಲು, ಹೊಸ್ಮಾರ್‌ಪದವು, ಕೊನ್ನೆಪದವು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News