ಹೆಬ್ರಿ: ಪದವಿ ಪರೀಕ್ಷೆ ನಡೆಯದ ಚಿಂತೆ; ಖಿನ್ನತೆಯಿಂದ ವಿಷ ಸೇವಿಸಿದ್ದ ವಿದ್ಯಾರ್ಥಿನಿ ಮೃತ್ಯು

Update: 2020-06-20 15:56 GMT
ಸಾಂದರ್ಭಿಕ ಚಿತ್ರ

ಹೆಬ್ರಿ, ಜೂ.20: ಕೊರೋನ ಲಾಕ್‌ಡೌನ್‌ನಿಂದಾಗಿ ಪದವಿ ಪರೀಕ್ಷೆ ನಡೆಯದ ಚಿಂತೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವರಂಗ ಗ್ರಾಮದ ಮಾತಿಬೆಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ಮಾತಿಬೆಟ್ಟು ನಿವಾಸಿ ಶಕುಂತಳಾ ಎಂದು ಗುರುತಿಸಲಾಗಿದೆ. ಹೆಬ್ರಿ ಮುನಿಯಲ್ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಇವರು, ಕೊರೋನ ಲಾಕ್‌ಡೌನ್‌ನಿಂದ ಅಂತಿಮ ವರ್ಷದ ಪರೀಕ್ಷೆ ಆಗದ ಬಗ್ಗೆ ಬೇಸರದಿಂದ ಇದ್ದರು. ಇದರಿಂದ ವಿದ್ಯಾಭ್ಯಾಸ ಇಲ್ಲದೆ ಒಳ್ಳೆಯ ಉದ್ಯೋಗ ಸಿಗಲ್ಲ ಎಂಬ ಹೆದರಿಕೆಯಿಂದ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಇದೇ ಕಾರಣದಿಂದ ಆಕೆ ಜೂ.8ರಂದು ಬೆಳಗ್ಗೆ ಮನೆ ಸಮೀಪದ ತಮ್ಮ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರು, ಜೂ.20ರಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News