ಬೈಂದೂರು: ನೀರಿನಲ್ಲಿ ಕೊಚ್ಚಿಹೋದ ಕೃಷಿಕನ ಮೃತದೇಹ ಪತ್ತೆ

Update: 2020-06-20 16:20 GMT

ಬೈಂದೂರು, ಜೂ.20: ತೋಡಿಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಕಾಲ್ತೋಡು ಬೊಳಂಬಳ್ಳಿ ಹೆದ್ದಾರಿಕೊಡ್ಲು ನಿವಾಸಿ ಗೋಪಾಲ ನಾಯ್ಕ(51) ಎಂಬವರ ಮೃತದೇಹ ಮೂರು ದಿನಗಳ ಬಳಿಕ ಜೂ.19ರಂದು ಬೆಳಗ್ಗೆ ಪತ್ತೆಯಾಗಿದೆ.

ಇವರು ಜೂ.16ರಂದು ಸಂಜೆ ಗದ್ದೆಯಲ್ಲಿ ಕೆಲಸ ಮಾಡಿ ವಾಪಾಸು ಮನೆಗೆ ಬರುತ್ತಿರುವಾಗ ವಿಪರೀತ ಮಳೆಯಿಂದಾಗಿ ರಭಸವಾಗಿ ಹರಿಯುತ್ತಿರುವ ತೋಡಿನ ನೀರಿಗೆ ಬಿದ್ದು ಕೊಚ್ಚಿಕೊಂಡು ನಾಪತ್ತೆಯಾಗಿದ್ದರು. ಇವರಿಗಾಗಿ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು. ಜೂ.19ರಂದು ಬೆಳಿಗ್ಗೆ ಕಾಲ್ತೋಡು ಗ್ರಾಮದ ಬೊಳಂಬಳ್ಳಿ(ಹೊಸಾಡು) ಹೊಳೆಯಲ್ಲಿ ಇವರ ಮೃತದೇಹ ಪತ್ತೆ ಯಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News