ಮಂಜೇಶ್ವರ: ಬೈಕ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶಕ್ಕೆ; ಆರೋಪಿಗಳು ಪರಾರಿ

Update: 2020-06-21 17:14 GMT

ಮಂಜೇಶ್ವರ: ಬೈಕ್ ನಲ್ಲಿ ಅಕ್ರಮವಾಗಿ ಸಾಗಿಸಲು ಯತ್ನಿಸಿದ ಮದ್ಯವನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಕುಂಬಳೆ ವಿಭಾಗದ ಅಬಕಾರಿ ಪೊಲೀಸರು ರವಿವಾರ ಬೆಳಿಗ್ಗೆ ಮೀಂಜ ಗ್ರಾಮದ ಕುಳಬೈಲು ಎಂಬಲ್ಲಿ ವಾಹನ ತಪಾಸಣೆ ವೇಳೆ ಬೈಕ್ ನಲ್ಲಿ 90 ಬಾಟಲಿ ಮದ್ಯಗಳೊಂದಿಗೆ ಬೈಕ್ ನಲ್ಲಿ ಬಂದ ಕುಳಬೈಲಿನ ಜೋನ್ ಡಿಸೂಜಾ, ವಿಲ್ಟರ್ ಡಿಸೂಝಾ , ಬೈಕ್ ಹಾಗೂ ಮದ್ಯವನ್ನು ಬಿಟ್ಟು ಪರಾರಿಯಾಗಿದ್ದಾರೆ.

ಬೈಕ್ ಹಾಗೂ ಮದ್ಯವನ್ನು ವಶಕ್ಕೆ ತೆಗೆದುಕೊಂಡ ಅಬಕಾರಿ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕುಂಬಳೆ ಅಬಕಾರಿ ಪ್ರಿವೆನ್ಟೀವ್ ಅಧಿಕಾರಿ ಪಿ.ರಾಜೀವನ್ , ಸಿಇಒಗಳಾದ ಪ್ರಿಶಿ ಪಿಎಸ್, ಕಣ್ಣಕುಂಞಿ ಟಿ, ಗಣೇಶ್ ಕೆ, ಮೇಮೋಲ್ ಜಾನ್ ಮತ್ತು ಸತ್ಯನ್ ಇ.ಕೆ. ಜೊತೆಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News