ಬೆಳ್ತಂಗಡಿ ತಾಲೂಕಿನಾದ್ಯಂತ ಎಸ್ಡಿಪಿಐ ಸಂಸ್ಥಾಪನಾ ದಿನಾಚರಣೆ
Update: 2020-06-22 16:58 GMT
ಬೆಳ್ತಂಗಡಿ, ಜೂ. 22: ಎಸ್ಡಿಪಿಐ ಪಕ್ಷದ ಸ್ಥಾಪನಾ ದಿನವನ್ನು ರವಿವಾರ ತಾಲೂಕಿನ ಪುಂಜಾಲಕಟ್ಟೆ, ತಣ್ಣೀರುಪಂತ, ಲಾಯಿಲ, ಬೆಳ್ತಂಗಡಿ, ಸುನ್ನತ್ಕೆರೆ, ಮದ್ದಡ್ಕ, ಚಾರ್ಮಾಡಿ, ಪಡಂಗಡಿ, ಬಡಕಜೆಕಾರು, ನಾವೂರ, ಕುಂಟಿನಿ, ಇಳಂತಿಲ, ಪೆರಲ್ದಕಟ್ಟೆ, ಕಾವಳಕಟ್ಟೆ ಹಾಗೂ ಬಂಗೇರುಕಟ್ಟೆ ಪ್ರದೇಶಗಳಲ್ಲಿ ನಡೆಸಿದರು.
ಕಾರ್ಯಕರ್ತರು ಧ್ವಜಾರೋಹಣ ನಡೆಸುವುದರೊಂದಿಗೆ ಮತ್ತು ಆಶಾ ಕಾರ್ಯಕರ್ತರಿಗೆ ಸನ್ಮಾನ,ಮಾಸ್ಕ್ ವಿತರಣೆ, ಸ್ವಚ್ಛತೆ, ಶ್ರಮದಾನ ಮತ್ತಿತರ ಸಮಾಜ ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಂಭ್ರಮಿಸಿದರು.
ಎಸ್ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಹೈದರ್ ನೀರ್ಸಾಲ್, ರಾಷ್ಟ್ರೀಯ ಕಾರ್ಯದರ್ಶಿ ಆಲ್ಫಾನ್ಸೊ ಫ್ರಾಂಕೋ, ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಪಿಎಫ್ಐ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಮುಸ್ತಫಾ ಜಿ. ಕೆರೆ, ಇಕ್ಬಾಲ್ ಬಂಗೇರುಕಟ್ಟೆ, ವಿಧಾನಸಭಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಪಾಲ್ಗೊಂಡಿದ್ದರು.