ಸಿಜಿಕೆ-2020 ಪ್ರಶಸ್ತಿಗೆ ಕಲಾವಿದ ಚಂದ್ರನಾಥ ಬಜಗೋಳಿ ಆಯ್ಕೆ

Update: 2020-06-26 15:52 GMT

ಹೆಬ್ರಿ, ಜೂ.26: ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ, ಸಂಸ ಥಿಯೇಟರ್ ಮತ್ತು ಅವಿರತ ಪುಸ್ತಕ ಬೆಂಗಳೂರು ಆರ್ಟ್ ಫೌಂಡೇಶನ್ ನೀಡುವ ಸಿಜಿಕೆ-2020 ಪ್ರಶಸ್ತಿಗೆ ಕಲಾವಿದ, ರಂಗ ನಿರ್ದೇಶಕ ಕಾರ್ಕಳ ಬಜಗೋಳಿಯ ಚಂದ್ರನಾಥ ಬಜಗೋಳಿ ಆಯ್ಕೆಯಾಗಿದ್ದಾರೆ ಎಂದು ಅಧ್ಯಕ್ಷ ಸುಕುಮಾರ್ ಮೋಹನ್ ತಿಳಿಸಿದ್ದಾರೆ.

24 ವರ್ಷಗಳಿಂದ ಚಿತ್ರಕಲೆ ಮತ್ತು ರಂಗಭೂಮಿ ಸೇವೆ ಮಾಡುತ್ತಿರುವ ಚಂದ್ರನಾಥ ಬಜಗೋಳಿ ಐದು ದೊಡ್ಡ ನಾಟಕ ಮತ್ತು 17 ಸಣ್ಣ ನಾಟಕ ಗಳನ್ನು ರಚಿಸಿದ್ದಾರೆ. ದ.ರಾ.ಬೇಂದ್ರೆ, ಗಿರೀಶ್ ಕಾರ್ನಾಡ್ ಸೇರಿ ಹಲವರ 75 ನಾಟಕ ಗಳನ್ನು ನಿರ್ದೇಶನ ಮಾಡಿದ್ದಾರೆ. ಮಾನಸ ಕಲಾ ಶಾಲೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಚಿತ್ರಕಲಾ ಶಿಕ್ಷಣವನ್ನು ನೀಡುತ್ತಿದ್ದು ಸತತ ಹತ್ತು ವರ್ಷಗಳಿಂದ ಚಿತ್ರಕಲಾ ಪರೀಕ್ಷೆಯಲ್ಲಿ ಶೇ.100 ಫಲಿತಾಂಸ ಬರುತ್ತಿರುವುದು ಚಂದ್ರನಾಥ್ ಇವರ ಸಾಧನೆ.

ಶನಿವಾರ ಪ್ರಶಸ್ತಿ ಪ್ರದಾನ : ಶನಿವಾರ ಕಾರ್ಕಳ ಶಿರಡಿಸಾಯಿ ಮಂದಿರ ದಲ್ಲಿ ಶಾಸಕ ಸುನೀಲ್ ಕುಮಾರ್, ಚಂದ್ರನಾಥರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಧರ್ಮಯೋಗಿ ಮೋಹನ್ ಅಧ್ಯಕ್ಷತೆ ವಹಿಸುವರು. ಸಾಯಿ ಮಂದಿರದ ಅಧ್ಯಕ್ಷ ಚಂದ್ರಹಾಸ ಸುವರ್ಣ ಅಧ್ಯಕ್ಷತೆ ವಹಿಸುವರು ಎಂದು ನಮ ತುಳುವೆರ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News