ಮಂಗಳೂರು: ಚಿನ್ನಾಭರಣ ಮಳಿಗೆಯೊಂದು ಸ್ವಯಂಪ್ರೇರಿತ ಬಂದ್

Update: 2020-06-27 10:14 GMT

ಮಂಗಳೂರು, ಜೂ.27: ಕೊರೋನ ವೈರಸ್ ರೋಗದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಚಿನ್ನಾಭರಣ ಮಳಿಗೆಯೊಂದು ಶನಿವಾರ ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿದೆ.

ಮಡಿಕೇರಿ ಮೂಲದ ಯುವತಿಯೊಬ್ಬರು ಇಲ್ಲಿ ಉದ್ಯೋಗಿಯಾಗಿದ್ದು, ರಜೆಯಲ್ಲಿ ತೆರಳಿದ್ದ ಈಕೆ ಗುರುವಾರ ಊರಿನಿಂದ ಕೆಲಸಕ್ಕೆ ಮರಳಿದ್ದರು. ಈ ಸಂದರ್ಭ ಯುವತಿಯಲ್ಲಿ ತಲೆನೋವು, ಜ್ವರದ ಲಕ್ಷಣ ಕಂಡುಬಂದಿತ್ತು. ತಕ್ಷಣ ಮಳಿಗೆಯ ಮುಖ್ಯಸ್ಥರು ಯುವತಿಯ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಅದರ ವರದಿ ಇನ್ನೂ ಬಂದಿಲ್ಲ. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಮಳಿಗೆಯನ್ನು ಸಂಸ್ಥೆಯ ಮುಖ್ಯಸ್ಥರು ಸ್ವಯಂಪ್ರೇರಿತವಾಗಿ ಮುಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News