ಮಂಗಳೂರು: ಚಿನ್ನಾಭರಣ ಮಳಿಗೆಯೊಂದು ಸ್ವಯಂಪ್ರೇರಿತ ಬಂದ್
Update: 2020-06-27 10:14 GMT
ಮಂಗಳೂರು, ಜೂ.27: ಕೊರೋನ ವೈರಸ್ ರೋಗದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಚಿನ್ನಾಭರಣ ಮಳಿಗೆಯೊಂದು ಶನಿವಾರ ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿದೆ.
ಮಡಿಕೇರಿ ಮೂಲದ ಯುವತಿಯೊಬ್ಬರು ಇಲ್ಲಿ ಉದ್ಯೋಗಿಯಾಗಿದ್ದು, ರಜೆಯಲ್ಲಿ ತೆರಳಿದ್ದ ಈಕೆ ಗುರುವಾರ ಊರಿನಿಂದ ಕೆಲಸಕ್ಕೆ ಮರಳಿದ್ದರು. ಈ ಸಂದರ್ಭ ಯುವತಿಯಲ್ಲಿ ತಲೆನೋವು, ಜ್ವರದ ಲಕ್ಷಣ ಕಂಡುಬಂದಿತ್ತು. ತಕ್ಷಣ ಮಳಿಗೆಯ ಮುಖ್ಯಸ್ಥರು ಯುವತಿಯ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಅದರ ವರದಿ ಇನ್ನೂ ಬಂದಿಲ್ಲ. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಮಳಿಗೆಯನ್ನು ಸಂಸ್ಥೆಯ ಮುಖ್ಯಸ್ಥರು ಸ್ವಯಂಪ್ರೇರಿತವಾಗಿ ಮುಚ್ಚಿದ್ದಾರೆ.