ಕುಂದಾಪುರ: ಹುಸೈನ್ ಹೈಕಾಡಿಗೆ ಸನ್ಮಾನ

Update: 2020-06-27 14:50 GMT

ಕುಂದಾಪುರ, ಜೂ.27: ಕಳೆದ ಹಲವು ವರ್ಷಗಳಿಂದ ಕುಂದಾಪುರ ಪರಿಸರ ದಲ್ಲಿ ಸಮಾಜ ಸೇವೆ ಮಾಡುತ್ತಾ, ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ಸತತವಾಗಿ 40 ದಿನಗಳ ಕಾಲ ಹಸಿದವರಿಗೆ ಊಟ ನೀಡಿ, ಅವಶ್ಯಕತೆ ಇದ್ದವರಿಗೆ ಕಿಟ್‌ಗಳನ್ನು ನೀಡಿ ಈಗಲೂ ಜನ ಸೇವೆಯನ್ನು ಮುಂದುವರಿಸಿ ಕೊಂಡು ಬಂದಿರುವ ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕ ಅಧ್ಯಕ್ಷ ಹುಸೈನ್ ಹೈಕಾಡಿ ಅವರನ್ನು ಕೋಟೇಶ್ವರದ ಸಹನಾ ಸುಹೇದ ಹಾಲ್‌ನಲ್ಲಿ ಸನ್ಮಾನಿಸ ಲಾಯಿತು.

ಭಾರತೀಯ ಜೇಸಿಸ್‌ನ ವಲಯ 15ರ ವಲಯ ಅಧ್ಯಕ್ಷ ಕೆ.ಕಾರ್ತಿಕೇಯ ಮಧ್ಯಸ್ತ ಅವರು ಹುಸೇನ್ ಹೈಕಾಡಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭ ದಲ್ಲಿ ವಲಯ 15ರ ತರಬೇತಿ ವಿಭಾಗದ ನಿರ್ದೇಶಕ ಅಶೋಕ್ ತೆಕ್ಕೆಟೆ,್ಟ ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ನಾಗೇಶ್ ನಾವಡ, ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಹವಾಲ್ದಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜೆಸಿಐನ ಪೂರ್ವ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ, ನಾಗೇಂದ್ರ ಪೈ, ಜಯಚಂದ್ರ ಶೆಟ್ಟಿ, ಮಂಜುನಾಥ್ ಕಾಮತ್, ವಲಯ ತರಬೇತಿದಾರ ಕೆ.ಕೆ. ಶಿವರಾಮ್, ಜೇಸಿರೇಟ್ ಅಧ್ಯಕ್ಷೆ ರೇಖಾ, ಯುವ ಜೇಸಿ ಅಧ್ಯಕ್ಷ ಕೀರ್ತಿ, ಕಾರ್ಯದರ್ಶಿ ಅಭಿಲಾಷ್, ಉಪಾಧ್ಯಕ್ಷ ವಿಜಯ್ ಭಂಡಾರಿ, ದಿನೇಶ್ ಕುಂದರ್, ದಿನೇಶ್ ಪುತ್ರನ್, ಗುರುರಾಜ್ ಕೊತ್ವಾಲ್, ಮಹೇಶ್ ಶೇಟ್, ರಾಘವೇಂದ್ರ, ಕೆ.ಸಿ.ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News