ಪಡುಬಿದ್ರೆ : ಕೆಲಸ ಇಲ್ಲದೆ ಯುವಕ ಆತ್ಮಹತ್ಯೆ

Update: 2020-06-27 17:41 GMT

ಪಡುಬಿದ್ರೆ , ಜೂ.27: ಲಾಕ್‌ಡೌನ್‌ನಿಂದ ಕೃಷಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲೂರು ಗ್ರಾಮ ಮಾಣಿಯೂರು ಎಂಬಲ್ಲಿ ಜೂ.26ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಮಾಣಿಯೂರು ನಿವಾಸಿ ವಿಕ್ಟರ್ ಡಿಸೋಜ ಎಂಬವರ ಪುತ್ರ ಅರ್ನಾಲ್ಡ್ ಡಿಸೋಜ(29) ಎಂದು ಗುರುತಿಸಲಾಗಿದೆ.

ಸುಮಾರು 1 ವರ್ಷ ನಾಲ್ಕು ತಿಂಗಳ ಹಿಂದೆ ವಿದೇಶದಲ್ಲಿನ ಕೆಲಸ ಬಿಟ್ಟು ಊರಿಗೆ ಬಂದಿದ್ದ ಇವರು, ಕಾಪುವಿನಲ್ಲಿ ಕ್ಯಾಂಟೀನ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಲಾಕ್‌ಡೌನ್ ನಂತರ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಇವರು, ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News