ಕೆರೆಗೆ ಬಿದ್ದು ಮೃತ್ಯು

Update: 2020-06-28 15:39 GMT

ಕಾರ್ಕಳ, ಜೂ. 28: ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಜೂ.27ರಂದು ಸಂಜೆ ವೇಳೆ ಸಾಣೂರು ಗ್ರಾಮದ ಪರ್ಪಲೆ, ಸೂರ್ಲಗುರಿ ಎಂಬಲ್ಲಿ ನಡೆದಿದೆ.

ಮೃತರನ್ನು ಸೂರ್ಲಗುರಿ ನಿವಾಸಿ ಶೇಖರ(55) ಎಂದು ಗುರುತಿಸಲಾಗಿದೆ. ಇವರು ಮನೆಯಿಂದ ಕುಂಟಲ್ಪಾಡಿ ಅಂಗಡಿಗೆ ಸಾಮಾನು ತರಲು ನಡೆದು ಕೊಂಡು ಹೋಗುತ್ತಿರುವಾಗ ಮನೆಯ ಸಮೀಪದ ಕೆರೆಗೆ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News