ಪಿಂಚಣಿ ವಿತರಣೆಯಲ್ಲಿ ತಾರತಮ್ಯ ಆರೋಪ : ಖಂಡನೆ

Update: 2020-06-28 16:09 GMT

ಬ್ರಹ್ಮಾವರ: ತಾಲೂಕಿನ ಹಾವಂಜೆ ಗ್ರಾಮವೊಂದರಲ್ಲಿಯೇ ಸುಮಾರು 21 ಫಲಾನುಭವಿಗಳಿಗೆ ಕಳೆದ 5 ತಿಂಗಳಿಂದ ವಿಕಲಚೇತನ, ಮನಸ್ವಿನಿ, ಸಂಧ್ಯಾ ಸುರಕ್ಷಾ ಮೊದಲಾದ ಪಿಂಚಣಿ ಯೋಜನೆಗಳು ಸಿಗದೆ, ಸರಕಾರ ವಂಚಿಸುತ್ತಾ ಬಂದಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಜಯಶೆಟ್ಟಿ ಬನ್ನಂಜೆ ಆರೋಪಿಸಿದ್ದಾರೆ.

ಉಡುಪಿ ತಾಲೂಕಿನಲ್ಲಿ ಈಗಾಗಲೇ ಎರಡು ಮೂರು ತಿಂಗಳಲಿನ ಕಂತು ಬಿಡುಗಡೆ ಮಾಡಿದೆ. ಆದರೆ ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದಲ್ಲಿ ರುವ ಫಲಾನುಭವಿಗಳಿಗೆ ಸರಕಾರದ ಪಿಂಚಣಿ ನೀಡದೆ ಸತಾಯಿಸುತ್ತಿವುದು ಖಂಡನೀಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News