ಕಡೆಕಾರ್ ಗ್ರಾಪಂ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ

Update: 2020-06-28 16:42 GMT

ಉಡುಪಿ, ಜೂ.28: ಉಡುಪಿ ವಿಧಾನಸಭಾ ಕ್ಷೇತ್ರದ ಕಡೆಕಾರ್ ಗ್ರಾಪಂ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಗುದ್ದಲಿ ಪೂಜೆಯನ್ನು ಶಾಸಕ ಕೆ.ರಘುತಿ ಭಟ್ ರವಿವಾರ ನೆರವೇರಿಸಿದರು.

ಕಡೆಕಾರು ಬಬ್ಬು ದೈವಸ್ಥಾನದ ಬಳಿ 45 ಲಕ್ಷ ರೂ. ವೆಚ್ಚದ ರಸ್ತೆಯ ಕಾಂಕ್ರೀಟೀಕರಣ, 25 ಲಕ್ಷ ರೂ. ವೆಚ್ಚದ ಕನ್ನರ್ಪಾಡಿ ಡಿಲಿಮಾ ಲೇಔಟ್ ರಸ್ತೆಯ ಕಾಂಕ್ರೀಟೀಕರಣ, 20 ಲಕ್ಷ ರೂ. ಅನುದಾನದಲ್ಲಿ ಕುತ್ಪಾಡಿ ಗರಡಿ ರಸ್ತೆ ಕಾಂಕ್ರೀಟೀಕರಣ, 20ಲಕ್ಷ ರೂ. ಅನುದಾನದ ಅನಂತಕೃಷ್ಣ ನಗರದ ರಸ್ತೆ ಕಾಂಕ್ರಿಟೀಕರಣ, 40ಲಕ್ಷ ರೂ. ಮೊತ್ತದಲ್ಲಿ ಕುತಾಲ್ಲಡಿ ಕೋಟಿ ಚೆನ್ನಯ ಮರು ಡಾಮರೀಕರಣ, ಕಡೆಕಾರು ಲಯನ್ಸ್ ಕಾಲನಿ ಬಳಿ 25 ಲಕ್ಷ ರೂ. ವೆಚ್ಚದಲ್ಲಿ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಯನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಜಿಪಂ ಅಧ್ಯ ದಿನಕರ್ ಬಾಬು, ತಾಪಂ ಸದಸ್ಯ ಶಿಲಾ ಕೋಟ್ಯಾನ್, ಕಡೆಕಾರ್ ಗ್ರಾಪಂ ಅಧ್ಯಕ್ಷ ರಘುನಾಥ್ ಕೋಟ್ಯಾನ್, ಸದಸ್ಯರು ಗಳಾದ ಪ್ರದೀಪ್‌ಚಂದ್ರ ಕಡೆಕಾರ್, ರಾಘವೇಂದ್ರ ಕುತ್ಪಾಡಿ, ವಿನೋಧಿನಿ, ಸುಶೀಲಾ, ಶಾಂತರಾಜ್, ವೇದಾವತಿ, ಗೀತಾ, ಆಶಾ ಶೆಟ್ಟಿ, ನವೀನ್ ಶೆಟ್ಟಿ, ಜಯಕರ್ ಶೆರಿಗಾರ್, ಅರುಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News