ಅಂದರ್ ಬಾಹರ್: 16 ಮಂದಿ ಬಂಧನ

Update: 2020-06-29 17:00 GMT

ಬ್ರಹ್ಮಾವರ, ಜೂ.29: ಉಪ್ಪೂರು ಗ್ರಾಮದ ಕೊಳಲಗಿರಿ ಚರ್ಚ್ ಹಿಂಭಾಗ ಹಾಡಿಯಲ್ಲಿ ಜೂ.28ರಂದು ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ 16 ಮಂದಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಶಮಿತ್(23), ಸುನಿಲ್(40), ಕೃಷ್ಣ(38), ಪ್ರಭಾಕರ(28), ಜೆರಾಲ್ಡ್ ಡಿಸೋಜ(49), ವಿಶ್ವನಾಥ(48), ರಾಕಿ ಕುಲಾಸೊ(64), ಸುನಿಲ್ ಡಿಸೋಜ (28), ಅಶೋಕ ಪೂಜಾರಿ(45), ಅಶ್ವತ್(22), ಮೆಲ್ವಿನ್(21), ರಕ್ಷಿತ್ (25), ಭಾಸ್ಕರ ಪೂಜಾರಿ(24), ಜೀವನ್(32), ಶ್ರೀಧರ ಪೂಜಾರಿ(45), ನರಸಿಂಹ(39) ಬಂಧಿತ ಆರೋಪಿಗಳು.

ಬಂಧಿತರಿಂದ 20,795ರೂ. ನಗದು, ಒಂದು ಲಕ್ಷ ರೂ. ವೌಲ್ಯದ ಒಂದು ಆಟೋರಿಕ್ಷಾ ಮತ್ತು ಐದು ದ್ವಿಚಕ್ರ ವಾಹನಗಳನ್ನು ಪೊಲೀಸರು ಸ್ವಾಧೀನಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News