ಕಟೀಲು ಅಸ್ರಣ್ಣರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ : ಮೂವರ ವಿರುದ್ಧ ಕೋಟಿ ರೂ. ಮಾನನಷ್ಟ ಮೊಕದ್ದಮೆ
Update: 2020-06-29 17:32 GMT
ಮಂಗಳೂರು, ಜೂ.29: ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಲಾಗುತ್ತಿದೆ ಎಂದು ಆರೋಪಿಸಿ ಮೂವರ ವಿರುದ್ಧ ಕಟೀಲು ಅರ್ಚಕರು ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಪ್ರಕರಣ ಕೈಗೆತ್ತಿಕೊಂಡ ಮೂರನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ, ಸಾಮಾಜಿಕ ಜಾಲತಾಣದಲ್ಲಿ ಅಸ್ರಣ್ಣರ ಬಗ್ಗೆ ಅವಹೇಳನ ಕಾರಿಯಾಗಿ ಪ್ರಚುರಪಡಿಸದಂತೆ ತಡೆಯಾಜ್ಞೆ ನೀಡಿದೆ.
‘ವಸಂತ, ಅನಂತ, ಸಂಜೀವ ಎಂಬವರ ವಿರುದ್ಧ ಕಟೀಲು ಅಸ್ರಣ್ಣರಾದ ಕೆ. ವಾಸುದೇವ ಅಸ್ರಣ್ಣ, ವೆಂಕಟರಮಣ ಅಸ್ರಣ್ಣ, ಶ್ರೀದೇವಿ ಕುಮಾರ್ ಅಸ್ರಣ್ಣ, ಶ್ರೀನಿವಾಸ ಅಸ್ರಣ್ಣ, ಲಕ್ಷೀನಾರಾಯಣ ಅಸ್ರಣ್ಣ, ಗೋಪಾಲಕೃಷ್ಣ ಅಸ್ರಣ್ಣ ಒಂದು ಕೋಟಿ ಮಾನನಷ್ಟ ಮೊಕದ್ದಮೆ ಮತ್ತು ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದರು’ ಎಂದು ನ್ಯಾಯವಾದಿ ಚಿದಾನಂದ ಕೆದಿಲಾಯ ತಿಳಿಸಿದ್ದಾರೆ.