ನಾಯರ್‌ಕೆರೆ ಮಸೀದಿಯಲ್ಲಿ ನಮಾಝ್ ಆರಂಭ

Update: 2020-07-01 16:34 GMT

ಉಡುಪಿ, ಜು.1: ಕೊರೋನ ಲಾಕ್‌ಡೌನ್‌ನಿಂದಾಗಿ ಬಂದ್ ಆಗಿದ್ದ ಬ್ರಹ್ಮಗಿರಿ ನಾಯರ್‌ಕೆರೆಯ ಹಶಿಮಿ ಮಸೀದಿಯಲ್ಲಿ ದೈನಂದಿನ ನಮಾಝ್ ಇಂದಿನಿಂದ ಆರಂಭಿಸಲಾಗಿದೆ.

ಪ್ರತಿದಿನ ರಾತ್ರಿ 8 ರಿಂದ ಮುಂಜಾನೆ 5 ರವರೆಗೆ ಮತ್ತು ರವಿವಾರ ಪೂರ್ತಿ ದಿನ ಲಾಕ್‌ಡೌನ್ ಇರುವುದರಿಂದ ಮಸೀದಿಯು ರವಿವಾರ ಹಾಗೂ ಫಜ್ರ್ ಮತ್ತು ಇಶಾಗಳಲ್ಲಿ ಮುಚ್ಚಲ್ಪಡುತ್ತದೆ. ಹಿರಿಯ ನಾಗರಿಕರು, ಹೆಂಗಸರು ಮತ್ತು ಮಕ್ಕಳಿಗೆ ಮನೆಯಲ್ಲೇ ಇರಲು ಕೋರಲಾಗಿದೆ.

ಸರಕಾರ ವಿಧಿಸಿರುವ ಎಲ್ಲ ಷರತ್ತುಗಳನ್ನು ಪಾಲಿಸಿ ಮಸೀದಿಯಲ್ಲಿ ನಮಾಝ್‌ಗೆ ಅವಕಾಶ ನೀಡಲಾಗುತ್ತಿದೆ ಎಂದು ಮಸೀದಿ ಅಧ್ಯಕ್ಷ ಜಕ್ರಿಯಾ ಅಸ್ಸಾದಿ ಮತ್ತು ನಿರ್ವಹಣಾ ಸಮಿತಿಯ ಸಾರ್ವಜನಿಕ ಸಂಪರ್ಕ ಎಂ.ಇಕ್ಬಾಲ್ ಮನ್ನಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News