ಎಸ್ಕೆಎಸ್ಸೆಸ್ಸೆಫ್ ವಿಖಾಯ ನೂತನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
Update: 2020-07-02 06:19 GMT
ಮಂಗಳೂರು : 2020 -2022 ರ ಸಾಲಿನ ಎಸ್ಕೆಎಸ್ಸೆಸ್ಸೆಫ್ ವಿಖಾಯ ನೂತನ ಸದಸ್ಯತ್ವ ಅಭಿಯಾನಕ್ಕೆ ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಕಚೇರಿಯಲ್ಲಿ ಶೈಖುನಾ ಮಿತ್ತಬೈಲು ಉಸ್ತಾದರ ಪುತ್ರ ಇರ್ಷಾದ್ ದಾರಿಮಿ, ವಿಖಾಯ ಜಿಲ್ಲಾ ಚಯರ್ಮ್ಯಾನ್ ಇಸ್ಮಾಯಿಲ್ ತಂಙಳ್ ಜನರಲ್ ಕನ್ವೀನರ್ ಆಸಿಫ್ ಕಬಕ ಕೋ ಆರ್ಡಿನೇಟರ್ ಮುಸ್ತಫ ಕಟ್ಟದಪಡ್ಪು ಇವರಿಗೆ ಸದಸ್ಯತ್ವ ಫಾರ್ಮ್ ನೀಡುವ ಮೂಲಕ ಅಧಿಕೃತ ಚಾಲನೆ ನೀಡಿದರು.
ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಪ್ರಧಾನ ಕಾರ್ಯದರ್ಶಿ ಹನೀಫ್ ಮುಸ್ಲಿಯಾರ್, ವಿಖಾಯ ಚಯರ್ಮ್ಯಾನ್ ಅಬ್ದುಲ್ ಖಾದರ್ ಮುಸ್ಲಿಯಾರ್, ಕನ್ವೀನರ್ ಖಾಲಿದ್, ಅಶ್ರಫ್ ಆಲಾಡಿ, ಶಾಫಿ ಜಿ.ಕೆ , ಶಾಕಿರ್ ಶಾಂತಿ ಅಂಗಡಿ, ಆರಿಫ್ ಸಜಿಪ, ಮುಹಮ್ಮದ್ ಅಲಿ ವಗ್ಗ ಮುಂತಾದವರು ಉಪಸ್ಥಿತರಿದ್ದರು.