ಉಪ್ಪೂರಿನಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವೀಕ್ಷಣೆ

Update: 2020-07-02 12:53 GMT

ಉಡುಪಿ, ಜು.2: ಉಪ್ಪೂರು ಗ್ರಾಮೀಣ ಕಾಂಗ್ರೆಸ್ ಆಶ್ರಯದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ರ ನಿವಾಸದಲ್ಲಿ ಪ್ರಮೋದ್ ಮಧ್ವರಾಜ್‌ರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು, ಜನಪ್ರತಿನಿಧಿಗಳು, ಕಾರ್ಯಕರ್ತರ ಪಾಲ್ಗೊಳ್ಳುವಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವೀಕ್ಷಣೆ, ಪ್ರತಿಜ್ಞಾ ಕಾರ್ಯಕ್ರಮ ನಡೆಯಿತು.

ಮಾಜಿ ಸಚಿವ ಪ್ರಮೋದ್ ದೀಪ ಬೆಳಗಿಸಿದರು. ಕಾರ್ಯಕ್ರಮದಲ್ಲಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಗುಲ್ವಾಡಿ, ಹಿರಿಯರಾದ ಕೃಷ್ಣಪ್ಪ ಪೂಜಾರಿ, ಸಂಜೀವ ಪೂಜಾರಿ, ಹೂವಯ್ಯ ಶೇರ್ವೇಗಾರ್, ತಾಪಂ ಸದಸ್ಯ ರಾದ ದಿನಕರ ಹೆರೂರು, ಪ್ರಶಾಂತ್ ಸುವರ್ಣ, ಸತೀಶ್ ಸಲ್ಯಾನ್, ಜಯಕರ ಆಚಾರ್ಯ, ಪ.ಸದಸ್ಯರಾದ ಗಣೇಶ್ ಡಿ. ಪೂಜಾರಿ, ಸಿರಿಲ್ ಅಲ್ಮೇಡಾ, ರಮೇಶ್ ಕರ್ಕೇರ ಹಾಗೂ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರೇಮಾ ಲೂಯಿಸ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News