ಪಡುಬಿದ್ರೆ : ಕೊರೋನ ವಾರಿಯರ್ಸ್ ವೈದ್ಯರುಗಳಿಗೆ ಗೌರವಾರ್ಪಣೆ

Update: 2020-07-02 15:13 GMT

ಪಡುಬಿದ್ರಿ : ಕೊರೋನ ವಾರಿಯರ್ಸ್ ಆಗಿ ಲಾಕ್‍ಡೌನ್ ಸಂದರ್ಭ ನಿಸ್ವಾರ್ಥ ಸೇವೆ ಸಲ್ಲಿಸಿದ ವೈದ್ಯರುಗಳನ್ನು ವೈದ್ಯರ ದಿನದ ಅಂಗವಾಗಿ ಪಡುಬಿದ್ರಿ ಲಯನ್ಸ್ ಕ್ಲಬ್ ಮತ್ತು ಪಲಿಮಾರು ಗ್ರಾಮ ಪಂ. ವತಿಯಿಂದ ಗೌರವಿಸಲಾಯಿತು.

ಪಡುಬಿದ್ರಿ ಲಯನ್ಸ್ ಅಧ್ಯಕ್ಷ ಹಾಗೂ ಪಲಿಮಾರು ಗ್ರಾಮ ಪಂ. ಅಧ್ಯಕ್ಷ ಜಿತೇಂದ್ರ ಫುರ್ಟಾಡೋ ಅಧ್ಯಕ್ಷತೆ ವಹಿಸಿದ್ದರು. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಬಿ.ರಾವ್, ಪಲಿಮಾರು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪೂರ್ಣಿಮಾ ಭಟ್, ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ಪ್ರಭು, ಉಡುಪಿ ಜಿಲ್ಲಾ ಆಯುಷ್ ಅಧ್ಯಕ್ಷ ಡಾ.ಎನ್.ಟಿ. ಅಂಚನ್, ಪಲಿಮಾರಿನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ.ಮನೋಜ್ ಕುಮಾರ್ ಶೆಟ್ಟಿಯವರನ್ನು ಗಣ್ಯರ ಸಮ್ಮುಖ ಸನ್ಮಾನಿಸ ಲಾಯಿತು.

ಅಭಿನಂದನಾ ಭಾಷಣಗೈದ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನವೀಣ್‍ಚಂದ್ರ ಸುವರ್ಣ, ಪಲಿಮಾರು ಗ್ರಾಮ ಪಂ. ಉಪಾಧ್ಯಕ್ಷೆ ಸುಮಂಗಲಾ ದೇವಾಡಿಗ, ಪಿಡಿಒ ಸತೀಶ್, ಪಡುಬಿದ್ರಿ ಲಯನ್ಸ್ ನಿಕಟಪೂರ್ವಾದ್ಯಕ್ಷ ಲಕ್ಷ್ಮಣ ಪೂಜಾರಿ, ಕಾರ್ಯದರ್ಶಿ ಕಪಿಲ್ ಆಚಾರ್ಯ ಉಪಸ್ಥಿತರಿದ್ದರು.

ಜಿತೇಂದ್ರ ಫುರ್ಟಾಡೋ ಸ್ವಾಗತಿಸಿದರು. ವೈ.ಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News