ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ: ರಮಾನಾಥ ರೈ ಮನೆಯಲ್ಲಿ ನೇರಪ್ರಸಾರ ವೀಕ್ಷಣೆ
Update: 2020-07-02 15:35 GMT
ಬಂಟ್ವಾಳ, ಜು.2: ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಸಮಾರಂಭದ ನೇರ ಪ್ರಸಾರವನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಕಳ್ಳಿಗೆ ಮನೆಯಲ್ಲಿ ಬೃಹತ್ ಪರದೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ತಾಲೂಕಿನ ಕಾಂಗ್ರೆಸ್ ಮುಖಂಡರು ಗುರುವಾರ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಬಿ.ರಮಾನಾಥ ರೈ, ಕೆಪಿಸಿಸಿ ಬಂಟ್ವಾಳ ಉಸ್ತುವಾರಿ ಸವಿತಾ ರಮೇಶ್, ಸುರೇಶ್ ಕೋಟ್ಯಾನ್, ತಾಲೂಕು ಪಂಚಾಯತ್ ಸದಸ್ಯ ಶಿವಪ್ರಸಾದ್ ಕನಪಡಿ, ವಲಯ ಅಧ್ಯಕ್ಷ ವಿಜಯ್ ಪಚ್ಚಿನಡ್ಕ, ದಿವಾಕರ ಪಂಬದೆಬೆಟ್ಟು, ಮಧುಸೂದನ್ ಶೆಣೈ, ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನ, ಪಂಚಾಯತ್ ಸದಸ್ಯರಾದ ರಮೇಶ್ ಮುಗೇರ, ಭಾಗೀರಥಿ, ಯುವ ಕಾಂಗ್ರೆಸ್ ಯತೀಶ್ ಕಳ್ಳಿಗೆ, ಬೂತ್ ಅಧ್ಯಕ್ಷ ಜಗದೀಶ್ ಕಂಜತ್ತುರು ಹಾಗೂ ಕಳ್ಳಿಗೆ ಕಾಂಗ್ರೆಸ್, ಲೋಹಿತ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.