ಉಡುಪಿ ಶ್ರೀಕೃಷ್ಣ ದರ್ಶನ ಸದ್ಯಕ್ಕಿಲ್ಲ: ಪರ್ಯಾಯಶ್ರೀ

Update: 2020-07-02 16:03 GMT

ಉಡುಪಿ, ಜು.2: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸಾರ್ವಜನಿಕರಿಗೆ ಶ್ರೀಕೃಷ್ಣ ದರ್ಶನ ಸದ್ಯಕ್ಕೆ ದೊರೆಯುವ ಸಾಧ್ಯತೆ ಇಲ್ಲ ಎಂಬ ಸಂದೇಶವನ್ನು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು ನೀಡಿದ್ದಾರೆ.

ಈ ಬಗ್ಗೆ ಇಂದು ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಅವರು, ಜನಸಾಮಾನ್ಯರು ಶ್ರೀಕೃಷ್ಣನ ದರ್ಶನಕ್ಕೆ ಎಂದಿನಿಂದ ಅವಕಾಶ ಸಿಗಲಿದೆ ಎಂದು ಕೇಳುತಿದ್ದು, ಕೃಷ್ಣಮಠದ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ದೇಶದ ಎಲ್ಲಾ ಕಡೆಯ ಪರಿಸ್ಥಿತಿಯನ್ನು ಅವಲೋಕಿಸಿ,ಎಲ್ಲಾ ಕಡೆಗಳಲ್ಲಿ ಈಗಿರುವ ಲಾಕ್‌ಡೌನ್ ಅನ್‌ಲಾಕ್ ಆದ ಬಳಿಕ ನಾವು ಇಲ್ಲಿ ದರ್ಶನಕ್ಕೆ ಅವಕಾಶ ನೀಡುವುದಾಗಿ ಅವರು ತಿಳಿಸಿದರು.

ಅಷ್ಟರವರೆಗೆ ಎಲ್ಲಾ ಭಕ್ತರು ತಮ್ಮ ಮನೆಗಳಲ್ಲೇ ಪ್ರಾರ್ಥನೆಗಳನ್ನು ಸಲ್ಲಿಸಬೇಕು. ಇಲ್ಲೂ ಕೂಡಾ ಎಲ್ಲಾ ದ್ವಿಜರು ದೇಶದ ಹಿತಕ್ಕೆ ಪ್ರಾರ್ಥನೆ ಯನ್ನು ಮಾಡಲಿದ್ದಾರೆ ಎಂದ ಅವರು, ರಾಗ ಮತ್ತು ಮೋಹ ಎಲ್ಲಾ ರೋಗಗಳಿಗೂ ಮೂಲ ಕಾರಣ ಎಂದು ಆಯುರ್ವೇದದಲ್ಲಿ ಒಂದು ಮಾತಿದೆ. ಆದುದರಿಂದ ಮನಸ್ಸನ್ನು ದೃಢವಾಗಿ ಇರಿಸಿಕೊಂಡಾಗ ಎಲ್ಲಾ ರೋಗಗಳನ್ನು ಗೆಲ್ಲಬಹುದು. ಆಗ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ದೇಶೀಯ ಚಿಕಿತ್ಸಾ ಪದ್ಧತಿಯನ್ನು ಪ್ರೋತ್ಸಾಹಿಸೋಣ ಎಂದವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News