ಕಟ್ಕೇರಿ ದೇವಸ್ಥಾನದಲ್ಲಿ ಕಳವು

Update: 2020-07-02 16:08 GMT

ಕುಂದಾಪುರ, ಜು.2: ತಾಲೂಕಿನ ಕೋಣಿ ಗ್ರಾಮದ ಕಟ್ಕೇರಿ ಶ್ರೀಮಹಾದೇವಿ ಕಾಳಿಕಾಂಬಾ ಅಮ್ಮನವರ ದೇವಸ್ಥಾನದ ದುರಿನ ಬಾಗಿಲವನ್ನು ಮುರಿದ ಯಾರೋ ಕಳ್ಳರು ಬೆಳ್ಳಿ ಖಡ್ಗ, ಬೆಳ್ಳಿ ಪರಷು ಕೊಡಲಿ ಸೇರಿದಂತೆ ಹಲವು ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಇಂದು ಬೆಳಗಿನ ಜಾವ 1 ರಿಂದ 2 ಗಂಟೆ ಮಧ್ಯೆ ನಡೆದಿದೆ.

ದೇವಸ್ಥಾನದ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ದೇವಸ್ಥಾನದ ಒಳ ಪ್ರವೇಶಿಸಿದ ಕಳ್ಳರು ದೇವಿಯ ಕೈಯಲ್ಲಿದ್ದ ಬೆಳ್ಳೆ ಖಡ್ಗ, ಬೆಳ್ಳಿ ಪರಷು ಕೊಡಲಿ ಹಾಗೂ ಸಿಸಿಟಿವಿಯ ಡಿವಿಆರ್‌ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News