ತ್ಯಾಜ್ಯ ನಿರ್ವಹಣೆ ಕುರಿತ ಕಿರುಚಿತ್ರ ಸ್ಪರ್ಧೆ: ಬಹುಮಾನ ವಿತರಣೆ

Update: 2020-07-03 12:21 GMT

ಉಡುಪಿ, ಜು.3: ಉಡುಪಿ ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯಲ್ಲಿ ತ್ಯಾಜ್ಯ ನಿರ್ವಹಣೆ ಕುರಿತಂತೆ ಅರಿವು ಮೂಡಿಸಲು ಆಯೋಜಿಸಲಾದ 'ನನ್ನ ಕಸ ನನ್ನ ಜವಾಬ್ದಾರಿ' ಎಂಬ ಕಿರುಚಿತ್ರ ಸ್ಪರ್ಧೆಯ ವಿಜೇತರಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಉಡುಪಿ ಜಿಪಂನ ಸಾಮಾನ್ಯ ಸಭೆಯಲ್ಲಿ ಬಹುಮಾನ ವಿತರಿಸಿದರು.

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಅನಿಲ್ ರೆಂಜಾಳ ಇವರಿಗೆ 10,000 ರೂ., ದ್ವಿತೀಯ ಬಹುಮಾನ ಪಡೆದ ಭಾಸ್ಕರ್ ಮಣಿಪಾಲ ಇವರಿಗೆ ರೂ.7,000 ಹಾಗೂ ತೃತೀಯ ಬಹುಮಾನ ಪಡೆದ ಸತ್ಯೇಂದ್ರ ಪೈ ಇವರಿಗೆ 3,000 ರೂ.ಗಳ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಹಾಗೂ ಜಿಪಂ ಸಿಇಓ ಪ್ರೀತಿ ಗೆಹ್ಲೋಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News