ಅಭಯಾರಣ್ಯದ ಬೇಟೆಗೆ ಯತ್ನ: ಇಬ್ಬರ ಬಂಧನ

Update: 2020-07-03 18:15 GMT

ಕೊಲ್ಲೂರು, ಜು.3: ಇಡೂರು-ಕುಂಜ್ಞಾಡಿ ಗ್ರಾಮದ ಮೂಕಾಂಬಿಕಾ ಅಭಯಾರಣ್ಯದ ಗುಂಡಬೇರು ಮೀಸಲು ಅರಣ್ಯದ ಕಾರೆಕೊಡ್ಲು ಎಂಬಲ್ಲಿ ಜು.23ರಂದು ರಾತ್ರಿ ವೇಳೆ ನಾಡಾ ಬಂದೂಕು ಮತ್ತು ಮದ್ದುಗುಂಡುಗಳೊಂದಿಗೆ ಅಕ್ರಮವಾಗಿ ಬೇಟೆಯಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಹೊಸುರು ಗ್ರಾಮದ ಹಣಬಿನ ಗದ್ದೆ ನಿವಾಸಿ ಬಾಬು ಪೂಜಾರಿ(52) ಹಾಗೂ ಇಡೂರು ಕುಂಜ್ಞಾಡಿ ಗ್ರಾಮದ ಕಾಡಿನಕಲ್ಲು ನಿವಾಸಿ ರವೀಂದ್ರ ಶೆಟ್ಟಿ(44) ಬಂಧಿತ ಆರೋಪಿಗಳು. ಇವರಿಂದ ನಾಡ ಬಂದೂಕು ಮತ್ತು ಮುದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೊಲ್ಲೂರು ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಕಚೇರಿಯ ಚಿತ್ತೂರು ಶಾಖೆಯ ಉಪವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ರಾತ್ರಿ ಗಸ್ತು ಸಂಚರಿಸುತ್ತಿದ್ದ ಸಂದರ್ಭದಲ್ಲಿ ಬೇಟೆಯಾಡಲು ಆಭಯಾರಣ್ಯ ದೊಳಗೆ ಪ್ರವೇಶಿಸಿರುವ ಇವರನ್ನು ಬಂಧಿಸಲಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News