ಎಸ್ಕೆ ಎಸ್ಸೆಸ್ಸೆಫ್ ತ್ವಲಬಾ ವಿಂಗ್ ದ.ಕ. ಜಿಲ್ಲಾ ಸಮಿತಿಗೆ ನೂತನ ಸಾರಥ್ಯ

Update: 2020-07-04 07:41 GMT

ಮಂಗಳೂರು: ಎಸ್ಕೆ ಎಸ್ಸೆಸ್ಸೆಫ್ ತ್ವಲಬಾ ವಿಂಗ್ ದ.ಕ.ಜಿಲ್ಲಾ ವತಿಯಿಂದ ತಸ್ಫಿಯಾ-2020 ನೂತನ ಪದಾಧಿಕಾರಿಗಳ ರೂಪಿಕರಣ ಸಭೆಯು ಇತ್ತೀಚೆಗೆ ಕೆ.ಪಿ ಕಾಂಪ್ಲೆಕ್ಸ್ ನಲ್ಲಿರುವ ಜಂಇಯ್ಯತುಲ್ ಫಲಾಹ್ ಹಾಲ್ ನಲ್ಲಿ ಎಸ್ಕೆ ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಸಯ್ಯಿದ್ ಆಮೀರ್ ತಂಙಳ್ ರವರ ಅಧ್ಯಕ್ಷತೆಯಲ್ಲಿ  ನಡೆಯಿತು.

ಸಭೆಯನ್ನು ಎಸ್ಕೆ ಎಸ್ಸೆಸ್ಸೆಫ್ ತ್ವಲಬಾ ವಿಂಗ್ ದ.ಕ.ಜಿಲ್ಲಾ ಉಸ್ತುವಾರಿ ರಶೀದ್ ರಹ್ಮಾನಿ ಉದ್ಘಾಟಿಸಿದರು. ಕೇಂದ್ರ ಸಮಿತಿ ಕಾರ್ಯದರ್ಶಿ ಖಾಸಿಂ ದಾರಿಮಿ ವಿಷಯ ಮಂಡಿಸಿದರು. ಎಸ್ಕೆ ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಸಮಿತಿ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಉಪಾಧ್ಯಕ್ಷ ಸಿದ್ದೀಕ್ ಅಬ್ದುಲ್ ಖಾದರ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭ ತ್ವಲಬಾ ವಿಂಗ್ ರಾಜ್ಯ ಸಮಿತಿ ಅಧ್ಯಕ್ಷ ನಹೀಂ ಫೈಝಿ ಮುಕ್ವೆ, ಪುತ್ತೂರು ವಲಯ ಕೋಶಾಧಿಕಾರಿ ಅಶ್ರಫ್ ಮುಕ್ವೆ ಉಪಸ್ಥಿತರಿದ್ದರು. ಇಸ್ಹಾಕ್ ಕಳಂಜ ಖಿರಾಅತ್ ಪಠಿಸಿದರು. ಉವೈಸ್ ತೋಕೆ ಸ್ವಾಗತಿಸಿ ನಿಯಾಝ್ ಪರಪ್ಪು ವಂದಿಸಿದರು.

2020-2022ನೇ ಸಾಲಿನ ನೂತನ ಸಮಿತಿ

ಜಿಲ್ಲಾ ಉಸ್ತುವಾರಿಯಾಗಿ ರಶೀದ್ ರಹ್ಮಾನಿ, ಕೊ-ಆರ್ಡಿನೇಟರ್ ಆಗಿ ಅಹ್ಮದ್ ನಹೀಂ ಫೈಝಿ ಮುಕ್ವೆ, ಚಯರ್ಮೇನಾಗಿ ಉವೈಸ್ ತೋಕೆ, ವೈ. ಚಯರ್ಮೆನ್ ಗಳಾಗಿ ಸಯ್ಯಿದ್ ಬಾತಿಷ್ ತಂಙಳ್ ಕುಕ್ಕಾಜೆ, ಸಫ್ವಾನ್ ಮಾಪಾಲ್, ಕನ್ವೀನರ್ ಆಗಿ ನಿಯಾಝ್ ಪರಪ್ಪು, ವೈ. ಕನ್ವೀನರ್ ಗಳಾಗಿ ಇಸ್ಹಾಕ್ ಕಳಂಜ, ಅಶೀಕ್ ಕಿನ್ಯಾ, ವರ್ಕಿಂಗ್ ಕಾರ್ಯದರ್ಶಿಯಾಗಿ ಸ್ವಾಲಿಹ್ ಮಂಡಾಡಿ, ಕೋಶಾಧಿಕಾರಿಯಾಗಿ ಶಂಸುದ್ದೀನ್ ಪನ್ಯ, ಮೀಡಿಯಾ ಕಾರ್ಯದರ್ಶಿಯಾಗಿ ಹನೀಫ್ ಸವಣೂರು, ವರ್ಕಿಂಗ್ ಸದಸ್ಯರಾಗಿ ಸಿದ್ದೀಕ್ ನಾವೂರು, ಅಬ್ದುಲ್ ಅಝೀಝ್ ವಿಟ್ಲ, ಅಶ್ರಫ್ ಉಳಾಯಿಬೆಟ್ಟು, ರೈಫಾನ್ ಬೊಳ್ಳೂರು, ರಫೀಕ್ ಅಡ್ಯಾರ್ ಕಣ್ಣೂರ್, ನಿಝಾಮುದ್ದೀನ್ ಕಡಬ ಇವರನ್ನು ನೇಮಕ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News