ರವಿವಾರ ಲಾಕ್‌ಡೌನ್: ಕಾಂಗ್ರೆಸ್ ಕಾರ್ಯಕರ್ತರ ಪಡೆ ರಚನೆ

Update: 2020-07-04 14:17 GMT

ಉಡುಪಿ, ಜು.4: ರವಿವಾರದ ಸಂಪೂರ್ಣ ಲಾಕ್‌ಡೌನ್‌ನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಮರಳು ದಂಧೆ ಹಾಗೂ ಅರಣ್ಯ ಸಂಪತ್ತು ಲೂಟಿ ಬಗ್ಗೆ ಹದ್ದಿನ ಕಣ್ಣಿಡಲು ಕಾಂಗ್ರೆಸ್ ಕಾರ್ಯರ್ತರ ಪಡೆಯನ್ನು ರಚಿಸಲಾಗಿದೆ.

ಜುಲೈ 4ರ ಶನಿವಾರ ರಾತ್ರಿ 8 ಗಂಟೆಯಿಂದ ಜುಲೈ 6 ಸೋಮವಾರ ಬೆಳಗ್ಗೆ 5 ಗಂಟೆ ತನಕ ದಂಧೆಕೋರರ ಮೇಲೆ ಹದ್ದಿನ ಕಣ್ಣು ಇಡುವಂತೆ ಪರ್ಕಳ ಕಾಂಗ್ರೆಸ್ ಮುಖಂಡ ಮೋಹನ್ದಾಸ್ ನಾಯಕ್, ಗಣೇಶ್ ರಾಜ್ ಸರಳೇಬೆಟ್ಟು, ಜಯಶೆಟ್ಟಿ ಬನ್ನಂಜೆ, ಸುನಿಲ್ ಕುಮಾರ್ ಮಾರುತಿ ನಗರ, ಎನ್.ಸತೀಶ್ ಶೆಟ್ಟಿ ಕೆಳಪರ್ಕಳ ಜಿಲ್ಲೆಯ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಈ ಹಿಂದೆ ಲಾಕ್‌ಡೌನ್ ಸಂದರ್ಭದಲ್ಲಿ ಸರಕಾರಿ ಯಂತ್ರವನ್ನು ದುರುಪಯೋಗಪಡಿಸಿದ ಆಡಳಿತ ಪಕ್ಷ ಮರಳು ದಂಧೆ ನಡೆಸಿರುವುದು ಸಾಬೀತಾಗಿದೆ. ಅದೇ ರೀತಿ ಅರಣ್ಯ ಸಂಪತ್ತು ಲೂಟಿ ಮಾಡಿರುವುದು ಹಾಗೂ ದಕ್ಷ ಅರಣ್ಯ ಅಧಿಕಾರಿಗಳನ್ನು ಎತ್ತಂಗಡಿ ಮಾಡಿರುವುದು ಜಗಜ್ಜಾಹೀರಾಗಿದೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News