ಕಾರು ಅಪಘಾತದಲ್ಲಿ ಪಾದಚಾರಿಯೊಬ್ಬ ಮೃತಪಟ್ಟ ಪ್ರಕರಣ: ಶ್ರೀಲಂಕಾ ಕ್ರಿಕೆಟಿಗನ ಬಂಧನ

Update: 2020-07-05 07:19 GMT

ಕೊಲಂಬೊ, ಜು.5: ಕಾರು ಅಪಘಾತದಲ್ಲಿ ಪಾದಚಾರಿಯೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಶ್ರೀಲಂಕಾದ ಬ್ಯಾಟ್ಸ್‌ಮನ್ ಕುಶಾಲ್ ಮೆಂಡಿಸ್‌ರನ್ನು ರವಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಕೊಲಂಬೊದ ಉಪ ನಗರ ಪಾನಡುರಾದಲ್ಲಿ ರವಿವಾರ ಬೆಳಗ್ಗಿನ ಜಾವ ಮೆಂಡಿಸ್ ಚಲಿಸುತ್ತಿದ್ದ ಕಾರು 74 ವಯಸ್ಸಿನ ಪಾದಚಾರಿ ವ್ಯಕ್ತಿಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ವೃದ್ಧ ಸಾವನ್ನಪ್ಪಿದ್ದಾರೆ.

ತಕ್ಷಣವೇ ಮೆಂಡಿಸ್‌ರನ್ನು ಬಂಧಿಸಿರುವ ಪೊಲೀಸರು ಬಳಿಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ ಎಂದು ತಿಳಿದುಬಂದಿದೆ.

25ರ ಹರೆಯದ ಮೆಂಡಿಸ್ ಶ್ರೀಲಂಕಾವನ್ನು 44 ಟೆಸ್ಟ್ ಹಾಗೂ 76 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಕೋವಿಡ್-19 ಲಾಕ್‌ಡೌನ್ ಬಳಿಕ ತರಬೇತಿಯನ್ನು ಮತ್ತೆ ಆರಂಭಿಸಿರುವ ಶ್ರೀಲಂಕಾ ತಂಡದ ಭಾಗವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News