ಉಡುಪಿ: ಬಿಜೆಪಿ ಕಾರ್ಯಕರ್ತರು ದುರಸ್ತಿ ಮಾಡಿದ ಮನೆ ಉದ್ಘಾಟನೆ

Update: 2020-07-06 14:31 GMT

ಉಡುಪಿ, ಜು.6: ಒಳಕಾಡು ವಾರ್ಡ್ ನಿವಾಸಿ ರಾಮಣ್ಣ ಶೆಟ್ಟಿ ಎಂಬವ ವರ ಶಿಥಿಲಗೊಂಡ ಮನೆಯನ್ನು ಬಿಜೆಪಿಯ ಮಂಜುನಾಥ್ ಹೆಬ್ಬಾರ್ ನೇತೃತ್ವದ ಕಾರ್ಯಕರ್ತರ ತಂಡ ದುರಸ್ತಿಗೊಳಿಸಿದ್ದು, ಇದರ ಉದ್ಘಾಟನೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಇಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಸ್ಥಳೀಯ ನಗರಸಭಾ ಸದಸ್ಯೆ ರಜನಿ ಹೆಬ್ಬಾರ್, ಬೂತ್ ಅಧ್ಯಕ್ಷ ಪ್ರತಾಪ್ ಮತ್ತು ಉದ್ಯಮಿಗಳಾದ ನಾಗೇಶ್ ಹೆಗ್ಡೆ, ಬಿಜೆಪಿ ಕಾರ್ಯಕರ್ತರು ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News