ಬಿಐಆರ್‌ಡಿ ಜಂಟಿ ನಿರ್ದೇಶಕರಾಗಿ ಅರುಣ್ ಎಂ. ತಲ್ಲೂರು ನೇಮಕ

Update: 2020-07-06 15:05 GMT

ಮಂಗಳೂರು, ಜು.6: ಮಂಗಳೂರಿನ ಬ್ಯಾಂಕರ್ಸ್ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್‌ಮೆಂಟ್‌ನ (ಬಿಐಆರ್‌ಡಿ) ಜಂಟಿ ನಿರ್ದೇಶಕರಾಗಿ ಅರುಣ್ ಎಂ. ತಲ್ಲೂರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

ನಬಾರ್ಡ್ ವಿವಿಧ ಆಡಳಿತ ವಿಭಾಗಗಳಲ್ಲಿ ಹಲವು ವರ್ಷ ಸೇವೆ ಸಲ್ಲಿಸಿರುವ ಅರುಣ್ ತಲ್ಲೂರು, ನವದೆಹಲಿ ‘ನ್ಯಾಬ್ಕೋನ್ಸ್’ನ ಉಪಾಧ್ಯಕ್ಷರಾಗಿದ್ದರು. ಬಿಐಆರ್‌ಡಿ ಮಂಗಳೂರು ಘಟಕವು ನಬಾರ್ಡ್ ಪ್ರಾಯೋಜಿತ ಸಂಸ್ಥೆಯಾಗಿದ್ದು, ಗ್ರಾಮೀಣ ಹಣಕಾಸು ಸಂಸ್ಥೆಗಳನ್ನು ಸ್ಪರ್ಧಾತ್ಮಕತೆಗೆ ಸಜ್ಜುಗೊಳಿಸಿ, ಗ್ರಾಹಕರ ಅಪೇಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಲು ಒತ್ತುಕೊಡುತ್ತದೆ. ಮಂಗಳೂರಿನ ನಗರದ ಬೋಂದೆಲ್‌ನಲ್ಲಿ ಕಾರ್ಯಾಚರಿಸುತ್ತಿರುವ ಬಿಐಆರ್‌ಡಿ, ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ತರಬೇತಿಗಳನ್ನು ನಡೆಸುತ್ತಿದೆ. 2019-20ರಲ್ಲಿ ಈ ಸಂಸ್ಥೆಯಲ್ಲಿ ಸುಮಾರು 130 ತರಬೇತಿ ಆಯೋಜಿಸಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News