ದ.ಕ.: ತಗ್ಗಿದ ಮಳೆ; ಅಲ್ಲಲ್ಲಿ ಹಾನಿ

Update: 2020-07-06 16:01 GMT

ಮಂಗಳೂರು, ಜು.6: ದ.ಕ.ಜಿಲ್ಲೆಯಲ್ಲಿ ರವಿವಾರ ಮಳೆ ಕ್ಷೀಣಿಸಿದ್ದು, ಹಗಲಿಡೀ ಬಿಸಿಲಿನ ವಾತಾವರಣವಿತ್ತು. ಮುಂಜಾನೆಯ ವೇಳೆ ಮೋಡ ಕವಿದ ವಾತಾವರಣದೊಂದಿಗೆ ಕೆಲಕಾಲ ಮಳೆ ಸುರಿದರೆ, ಆ ಬಳಿಕ ಮಳೆಯೇ ಕಾಣಿಸಲಿಲ್ಲ. ಆದರೆ, ಅಲ್ಲಲ್ಲಿ ಕೆಲವು ಕಡೆ ಮಳೆಯಾನಿಯಾದ ಬಗ್ಗೆ ವರದಿಯಾಗಿದೆ.

ನಗರದ ವೆಲೆನ್ಸಿಯಾದಲ್ಲಿ ಮನಪಾಕ್ಕೆ ಸೇರಿದ ಕಾಂಪೌಂಡ್‌ಗೆ ಕುಸಿದು ಬಿದ್ದಿದೆ. ಅಲ್ಲದೆ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ಕೂಟೇಲು ಎಂಬಲ್ಲಿ ಮುಖ್ಯರಸ್ತೆಯ ಬಳಿ ಗುಡ್ಡ ಕುಸಿದಿದೆ. ಈ ಮಧ್ಯೆ ಗ್ರಾಮಾಂತರ ಭಾಗದ ಕೆಲವು ಕಡೆ ಮರಗಳು ಉರಳಿದ ಬಗ್ಗೆ ಮಾಹಿತಿ ಇದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ. ರವಿವಾರ ಗುರುಪುರದಲ್ಲಿ ನಡೆದ ದುರಂತ ಹೊರತುಪಡಿಸಿ ಜಿಲ್ಲೆಯಲ್ಲಿ ಸೋಮವಾರ ಯಾವುದೇ ಅವಘಡಕ್ಕೆ ಸಂಬಂಧಿಸಿ ದೂರು ಬಂದಿಲ್ಲ ಎಂದು ದ.ಕ.ಜಿಲ್ಲಾಧಿಕಾರಿ ಕಚೇರಿಯ ತುರ್ತು ಸಹಾಯವಾಣಿಯ ಸಿಬ್ಬಂದಿ ವರ್ಗವು ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News