ಮದ್ರಸ ಅಧ್ಯಾಪಕರಿಗೆ ವೇತನವನ್ನು ನೀಡಲು ಮನವಿ

Update: 2020-07-06 16:15 GMT

ಮಂಗಳೂರು, ಜು.6: ಕೋವಿಡ್-19 ಕಾರಣದಿಂದ ಮದ್ರಸ ಪ್ರಾರಂಭವಾಗದ್ದರಿಂದ ಮುಅಲ್ಲಿಮರು ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಮಕ್ಕಳಿಗೆ ಧಾರ್ಮಿಕ ವಿದ್ಯಾಭ್ಯಾಸ ಕಲಿಸುತ್ತಿರುವ ಮದ್ರಸ ಅಧ್ಯಾಪಕರು ಮಾಸಿಕ 15,000ಕ್ಕಿಂತಲೂ ಕಡಿಮೆ ವೇತನ ಪಡೆಯುವವರಾಗಿದ್ದಾರೆ. ಇದೀಗ ಕೋವಿಡ್-19ನಿಂದ ಮುಅಲ್ಲಿಮರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಹಾಗಾಗಿ ಪ್ರತಿ ಮೊಹಲ್ಲಾಗಳು ಅಧ್ಯಾಪಕರ ವೇತನವನ್ನು ಮೊದಲಿನ ಹಾಗೆ ನೀಡಿ ಸಹಕರಿಸಬೇಕು ಎಂದು ಸುನ್ನಿ ಸಂದೇಶ ಪತ್ರಿಕಾ ಬಳಗ, ಕಿಸಾ ಕಾರ್ಯಕರ್ತರು ಮತ್ತು ಎಂಆರ್ ಬಕ್ ಸ್ಟಾಲ್ ನ ವ್ಯವಸ್ಥಾಪಕರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News