ಈದ್ಗಾ ಮಸ್ಜಿದ್‌ನಲ್ಲಿ ಕೋವಿಡ್ ಬಗ್ಗೆ ಮಾಹಿತಿ ಶಿಬಿರ

Update: 2020-07-06 17:51 GMT

ಮಂಗಳೂರು, ಜು.6: ನಗರದ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಮಂಗಳೂರು ಇದರ ವತಿಯಿಂದ ಬಾವುಟಗುಡ್ಡೆ ಈದ್ಗಾ ಜುಮಾ ಮಸೀದಿಯಲ್ಲಿ ಕೋವಿಡ್ 19 ಬಗ್ಗೆ ಮಾಹಿತಿ ಶಿಬಿರವು ಸೋಮವಾರ ಜರುಗಿತು.

ಮಸೀದಿಯ ಆಡಳಿತ ಕಮಿಟಿಯ ಸದಸ್ಯ ಎಸ್‌ಎಂ ರಶೀದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯುಟಿ ಖಾದರ್ ಶಿಬಿರ ಉದ್ಘಾಟಿಸಿ ಮಾತನಾಡಿದರು. ಚರ್ಮರೋಗ ತಜ್ಞ ಡಾ.ನವೀನ್, ಬಿಎಚ್‌ಒ ಕೊ-ಓಡಿನೇಟರ್ ಡಾ. ಸಚ್ಚಿತಾನಂದ, ಯೆನೆಪೊಯ ಆಸ್ಪತ್ರೆಯ ಸಾಮಾಜಿಕ ವಿಭಾಗದ ಡಾ. ಮುಹಮ್ಮದ್ ಗುತ್ತಿಗಾರ್, ಸೈಕಾಟ್ರಿಸ್ಟ್ ವಿಭಾಗದ ಸಹಾಯಕ ಪ್ರೊಫೆಸರ್ ಡಾ. ಜಯದೇವ ಮಾಹಿತಿ ಶಿಬಿರ ನಡೆಸಿಕೊಟ್ಟರು. ಝೀನತ್ ಬಕ್ಷ್ ಮಸೀದಿಯ ಕೋಶಾಧಿಕಾರಿ ಅಹ್ಮದ್ ಬಾಷಾ ತಂಙಳ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮಕ್ಬೂಲ್ ಹಾಜಿ, ಅದ್ದು ಹಾಜಿ, ಐ. ಮೊಯ್ದಿನಬ್ಬ ಹಾಜಿ, ಅಶ್ರಫ್ ಬಯ್ಯ ಹಾಗೂ ನಗರದ ಎಲ್ಲಾ ಜುಮಾ ಮಸೀದಿಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News