ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾಗಿ ಡಾ.ಕರುಣಾಕರ ಕೋಟೆಗಾರ್ ನೇಮಕ

Update: 2020-07-08 14:26 GMT

ಕುಂದಾಪುರ, ಜು.8: ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಡಾ.ಕರುಣಾಕರ ಎ.ಕೋಟೆಗಾರ್ ನೇಮಕಗೊಂಡಿದ್ದಾರೆ. ರಾಜ್ಯಪಾಲರು ಮುಂದಿನ ಮೂರು ವರ್ಷದ ಅವಧಿಗೆ ಅವನ್ನು ನಾಮನಿರ್ದೇಶನ ಮಾಡಿದ್ದಾರೆ.

ಮಣಿಪಾಲ ಎಂಐಟಿಯಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಪ್ರಾಧ್ಯಾ ಪಕ ಹಾಗೂ ಮುಖ್ಯಸ್ಥರಾಗಿರುವ ಡಾ. ಕರುಣಾಕರ ಕೋಟೆಗಾರ್, ಕಳೆದ 22 ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದಿ.ಅಣ್ಣಪ್ಪ ಕೋಟೆಗಾರ್ ಹಾಗೂ ಸುಶೀಲಾ ದಂಪತಿಗಳ ಪುತ್ರರಾದ ಕರುಣಾಕರ  ಮೂಲತಃ ಬೈಂದೂರು ತಾಲೂಕು ಪಡುವರಿಯವರಾಗಿದ್ದು, ಪ್ರಸ್ತುತ ಉಡುಪಿಯ ಇಂದ್ರಾಳಿಯಲ್ಲಿ ನೆಲೆಸಿದ್ದಾರೆ. ಇವರ ಪತ್ನಿ ಡಾ.ಅನಿತಾ ಎಂಐಟಿಯ ಇಲೆಕ್ಟ್ರಾನಿಕ್ಸ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News