ಉಡುಪಿ: ಮೀನುಗಾರರ ಸಬ್ಸಿಡಿಗೆ 22.75 ಕೋಟಿ ರೂ. ಬಿಡುಗಡೆ

Update: 2020-07-08 15:56 GMT

ಉಡುಪಿ, ಜು.8: ರಾಜ್ಯ ಸರಕಾರ ಕರಾವಳಿಯ ಕರ್ನಾಟಕದ ಮೀನುಗಾರರ ಯಾಂತ್ರೀಕೃತ ಬೋಟುಗಳಿಗೆ ಬಳಸುವ ಡೀಸೆಲ್ ಸಬ್ಸಿಡಿಯಲ್ಲಿ ಎರಡನೇ ಕಂತಾಗಿ ಒಟ್ಟು 22.75ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ರಾಜ್ಯ ಮುಜರಾಯಿ ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಕೊರೋನದ ಈ ಸಂಕಷ್ಟದ ಸಮಯದಲ್ಲಿ ತಮ್ಮ ಮನವಿಗೆ ಸ್ಪಂಧಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎರಡನೇ ಕಂತಿಗೆ ಈ ಹಣವನ್ನು ಬಿಡುಗಡೆ ಮಾಡಿದ್ದಾರೆ. ಮೊದಲ ಕಂತಾಗಿ ಈ ಹಿಂದೆ 25 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಮೂಲಕ ಇದುವರೆಗೆ ಒಟ್ಟು 47.75 ಕೋಟಿ ರೂ.ಗಳನ್ನು ಮೀನುಗಾರರ ಬೋಟುಗಳಿಗೆ ಬಳಸುವ ಡೀಸೆಲ್ ಸಬ್ಸಿಡಿಯಾಗಿ ಬಿಡುಗಡೆ ಮಾಡಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News