ಗುರುಪುರ ದುರಂತ: ಮೃತ ಮಕ್ಕಳ ಮನೆಗೆ ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಭೇಟಿ
Update: 2020-07-08 16:34 GMT
ದೇರಳಕಟ್ಟೆ: ರವಿವಾರದಂದು ಗುರುಪುರದ ಬಂಗ್ಲೆಗುಡ್ಡೆಯಲ್ಲಿ ಸಂಭವಿಸಿದ ಗುಡ್ಡ ಕುಸಿತ ಘಟನೆಯಲ್ಲಿ ಮೃತಪಟ್ಟ ಮಕ್ಕಳ ಮನೆಗೆ ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಪದಾಧಿಕಾರಿಗಳು ಬೇಟಿ ನೀಡಿ ಮಕ್ಕಳ ಪೋಷಕರಿಗೆ ಸಾಂತ್ವಾನ ಹೇಳಿದರು.
ನಿಯೋಗದಲ್ಲಿ ರೇಂಜಿನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಕೊಣಾಜೆ, ಕೋಶಾಧಿಕಾರಿ ಮೊಹಿದೀನ್ ಬಾವು ಮರಾಠಿಮೂಲೆ, ಉಪಾಧ್ಯಕ್ಷರಾದ ಅಶ್ರಫ್ ಮರಾಠಿಮೂಲೆ, ವರ್ಕಿಂಗ್ ಕಾರ್ಯದರ್ಶಿ ಹನೀಫ್ ಎಸ್.ಬಿ.,ಕಾರ್ಯಕಾರಿ ಸಮಿತಿ ಸದಸ್ಯರಾದ ಇಸ್ಮಾಯಿಲ್ ಪಡ್ಪು(ಪುತ್ತುಬಾವು), ಸುನ್ನಿ ಸಂದೇಶದ ಮುಸ್ತಫಾ ಫೈಝಿ, ಎಸ್ ವೈ ಎಸ್ ಫಳ್ನೀರ್- ಪಾಂಡೇಶ್ವರ ಶಾಖಾ ಅಧ್ಯಕ್ಷರಾದ ಸಿತಾರ್ ಮಜೀದ್ ಹಾಜಿ ಮತ್ತು ಗುರುಪುರ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಕಾರ್ಯದರ್ಶಿ ಸಾಹುಲ್ ಹಮೀದ್ ಮತ್ತಿತರರು ಹಾಜರಿದ್ದರು.