ಮುಂಡಗೋಡ: ಹಾವು ಕಡಿತಕ್ಕೆ ವ್ಯಕ್ತಿ ಬಲಿ

Update: 2020-07-09 12:58 GMT

ಮುಂಡಗೋಡ: ಹಾವು ಕಡಿತದಿಂದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಮೈನಳ್ಳಿ ಪಂಚಾಯತ್ ವ್ಯಾಪ್ತಿಯ ಕಳಕಿಕಾರೆ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ನಾನಾ ದೊಂಡು ಪಾಟೀಲ(36)  ಎಂದು ತಿಳಿದು ಬಂದಿದೆ.

ಜುಲೈ 4 ರಂದು  ವ್ಯಕ್ತಿಯ ತನ್ನ ಹೊಲ ಸ್ವಚ್ಚತೆಗಾಗಿ ಕೊಲ್ಡು ಹೋಡೆಯುತ್ತಿದ್ದಾಗ ಯಾವುದೋ ವಿಷ ಸರ್ಪ ಕಚ್ಚಿದೆ ಎನ್ನಲಾಗಿದ್ದು, ತಕ್ಷಣ ಮುಂಡಗೋಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್‍ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ಮೃತಪಟ್ಟಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News